Wednesday, 29 February 2012

ಕುವೆಂಪು ಕ್ಯಾಂಪಸ್ಸಲ್ಲಿ..!

ಅಬ್ಬ! ಬಸ್ಸು ಹತ್ತಿ ನಿಟ್ಟುಸಿರು ಬಿಡಬೇಕು ಅನ್ನುವಷ್ಟರಲ್ಲಿ, ಸ್ಸು ಸರಿಯಿಲ್ಲ ಎನ್ನುವ ಸುದ್ದಿ ನಮ್ಮನ್ನು ಒಂಥರಾ ಸಂದಿಗ್ದ ಸ್ಥಿತಿಗೆತಳ್ಳಿತು. ಅದಾಗಲೇ ಸಂಜೆ ಬೇರೆಯಾಗಿತ್ತು. ಅಲ್ಲಿ ನಮ್ಮ ರೂಮಿನ ವ್ಯವಸ್ಥೆ ಎನೊಂಥಾ ಗೊತ್ತಿರಲಿಲ್ಲ.. ಆಗ ದೇವರೇ ಕಳಿಸಿದಂತೆಮತ್ತೊಂದು ಬಸ್ಸು ಬಂತು.. ನಮ್ಮ ಗಂಟು ಮೂಟೆಯನ್ನು ಹೊತ್ತುಕೊಂಡು ಆ ಬಸ್ಸಿಗೆ ಹತ್ತಿದೆವು.. ಅಬ್ಬ ಎರಡು ಬಸ್ಸಿನ ಜನತುಂಬಿಯಾಗಿತ್ತು.. ನಾವೆಲ್ಲರೂ ಹತ್ತಿ ಡ್ರೈವರನ chamber ತರವಿರುವ ಸ್ಥಳದಲ್ಲಿ ನಿಂತೆವು..! ಇನ್ನೂ ಜನ ಹತ್ತುತಲೇ ಇದ್ದರು. ಅಂತೂ ಡ್ರೈವರ್ ಸೀಟಿನ ಡೋರ್ ಒಪನಾಗಿ ಅಲ್ಲಿಂದ ಒಬ್ಬ ಹತ್ತಿದಾ ಸ್ವಲ್ಪ ಸಮಾಧಾನವಾಯಿತು. ಡ್ರೈವರ್ ಹತ್ತಿಯಾಯಿತಲ್ಲ,ನ್ನು ಬಸ್ಸು ಹೊರಡಬಹುದೆಂದು.! ಆದರೆ ಹತ್ತಿದವ ಡ್ರೈವರ್ ಆಗಿರದೆ ಕಂಡಕ್ಟರಾಗಿದ್ದ! ಅವ ನಮ್ಮಿಂದ ಹಣ ತಗೊಂಡು, ಸ್ಥಳ ವಿಲ್ಲದ ಬಸ್ಸಲ್ಲಿ ಜಾಗ ಮಾಡುತ್ತಾ ಹೋದ.

ಬಸ್ಸಲ್ಲಿ ಎಲ್ಲರು ನಮ್ಮೊಟ್ಟಿಗೆ ಇದ್ದ ಗೆಳತಿಯರನ್ನೇ ಎವೆಯಿಕ್ಕದೆ ನೋಡುತಿದ್ದರು. ಅವರ ನೋಟ ನೋಡುವಾಗ, ಇವರೆಲ್ಲಿಂದಲೋಬೇರೆ ಗ್ರಹದಿಂದ ಬಂದವರೋ, ಅಥವಾ ಮನುಷ್ಯರ ಥರ ಕಾಣುತ್ತಿರಲಿಲ್ಲವೋ ಏನೋ ಅಂತ ಅನ್ನಿಸುವಂತಿತ್ತು!ಹಾಗೆ ಬಸ್ಸುಹೊರಡಿತು. ಮತ್ತೆ ತೂರಾಡುತ್ತ, ಅಲ್ಲಲ್ಲಿ ನಿಲ್ಲಿಸುತ್ತಾ ಸಾಗಿದ ಬಸ್ಸು ಶಂಕರ ಘಟ್ಟ ಮುಟ್ಟಿತು! ಅಲ್ಲಿಯೇ ನಾವಿಳಿಯಬೇಕಾದದ್ದು . ಅಲ್ಲಿಂದ ಮುಂದೆ ನಾವು, ನಮಗಾಗಿ ಬಂದಿದ್ದ ಇಬ್ಬರ ಎಸ್ಕಾರ್ಟ್ ನೊಂದಿಗೆ university ಕ್ಯಾಂಪಸ್ ಗೆ ಹೋದೆವು.. ಅಲ್ಲಿಲೇಡಿಸ್ ಹಾಸ್ಟೆಲಲ್ಲಿ ಹುಡುಗಿಯರನ್ನು ಬಿಟ್ಟು, ನಮ್ಮನ್ನು guest house ಗೆ ಕರ್ಕೊಂಡು ಹೋದರು.. ಅಲ್ಲಿ ನಾವು ಮೂರೂ ಜನಹುಡುಗರಿಗೆ ಒಂದು ರೂಮನ್ನು ಕೊಟ್ಟಾಗ, ರೂಮನ್ನು ಕಂಡ ನಮಗೆ ಕುಶಿಯೋ ಕುಶಿ..! ಸ್ವಲ್ಪ ನಂತರ ಗೊತ್ತಾಗಿದ್ದು ಈ ಒಂದುರಾತ್ರಿ ಮಾತ್ರ ಅಂತ..!

ಬೆಳಿಗೆದ್ದು ನಮ್ಮ ಬ್ಯಾಗನ್ನು ಪ್ಯಾಕ್ ಮಾಡಿ ಹುಡುಗಿಯರ ಹಾಸ್ಟೆಲಲ್ಲಿ ಇಟ್ಟು, ಕ್ಯಾಂಪಸ್ ಪಯಣ ಆರಂಬಿಸಿದೆವು!! ರಾತ್ರಿಯ ಭೀಕರಕತ್ತಲಲ್ಲಿ ಕಾಣದ ಪ್ರಕೃತಿಯ ಸೌಂದರ್ಯ, ಬೆಳಗಿನ ಮಂಜಿನಲ್ಲಿ ಮುಸುಕಿತ್ತು.. ಸೂರ್ಯ ಪೂರ್ವದಲ್ಲಿ ಮೇಲೇರುತಿದ್ದಂತೆ,ಪ್ರಿಯಕರನ ಸ್ಪರ್ಶಕ್ಕೆ ಎಂಬಂತೆ ತಣ್ಣನೆ ಹಿಮ ಕರಗುತ್ತಿತ್ತು. ಅಬ್ಬ!! ಆಗಲೇ ನಮಗರಿವಾದದ್ದು ರಾತ್ರಿ ನಾವಿದ್ದದ್ದು ಭದ್ರಅರಣ್ಯದಂಚಿನಲ್ಲಿ ಅಂತ!! ಪ್ರಕೃತಿಯ ಮಡಿಲಲ್ಲಿ ಮಲಗಿದಂತಿದ್ದ ಕ್ಯಾಂಪಸ್, ತನ್ನದೇ ಶಿಲ್ಪ ಕಲೆಗೆ ಮನ ಸೋಲುವಂತೆಮಾಡಿತ್ತು!! ಡೈನೋಸಾರ್, ಜಿರಾಫೆ, ಆನೆ, ಕುದುರೆಯ ಶಿಲ್ಪ ಗಳು ಹಸಿರು ಪ್ರಕೃತಿಯ ಮಧ್ಯೆ ನಿಜವಾದ ಪ್ರಾಣಿಗಳನ್ನೇಹೋಲುತಿತ್ತು..! ಹಾಗೆ ಕ್ಯಾಂಪಸ್ ಗೆ ಒಂದು ಸುತ್ತು ಬರುವಷ್ಟರಲ್ಲಿ ಬೆಳಗಿನ ಟೀ ಯ ಸಮಯವಾಯಿತು. ಮಲೆನಾಡಿನ ಕಾಫಿಅಂದರೆ ಅದು ಹತ್ತರಿಂದ ಇಪ್ಪತ್ತು ml ಇರಬಹುದು. ಕರಾವಳಿಯವರಾದ ನಮಗೆ ಅದು ಗಂಟಲಿಗೆ ತಾಕದಂತಿತ್ತು!!

ಹಾಗೆ ತಿಂಡಿ ತಿಂದು , inaugral ಪ್ರೊಗ್ರಾಮ್ ಆದ ಕೂಡಲೇ ನಮ್ಮ ಗೆಳತಿಯರಲ್ಲಿ ಕೆಲವರು ನಾಪತ್ತೆ! ಅವರಲ್ಲಿ ಹೆಚ್ಹಿನವರುರೂಮಲ್ಲಿ ಹೋಗಿ ಬೆಡ್ಡಲ್ಲಿ ಬಿದ್ಕೊಂಡಿದ್ದರು!!! ನಾವು ಬೇರೆ ದಾರಿ ಕಾಣದೆ ಅಲ್ಲೇ ಸೆಮಿನಾರ್ ಹಾಲಲ್ಲಿ ಸಂಜೆಯವರೆಗೂಕುಳಿತೆವು.. ಪೋಸ್ಟರು,ಡಾನ್ಸ್, ಹೀಗೆ ಸಂಜೆಯ ಪ್ರೋಗ್ರಾಮ್ ಕಳೆಯುವಷ್ಟರಲ್ಲಿ ಊಟಕ್ಕಾಗಿ ಕಾಯುವ ಸರದಿ. ಊಟದ ನಂತರಅವತ್ತಿನ ಕಾರ್ಯಕ್ರಮ ಮುಗಿದು ರೂಮಿನ ಕಡೆ ಹೆಜ್ಜೆ ಹಾಕಿದೆವು!!!

ಹಿಂದಿನ ರಾತ್ರಿ ಗೆಸ್ಟ್ ಹೌಸಲ್ಲಿ ಕಳೆದ ನಾವು ಮೂವರು ಹುಡುಗರು, ಈಗ ಅಲ್ಲಿಂದ ಐದಾರು ಕಿಲೋ ಮೀಟರ್ ದೂರವಿರುವಹಾಸ್ಟೆಲಿಗೆ ಹೋಗಬೇಕಾಗಿತ್ತು!!!

Monday, 20 February 2012

ಭದ್ರಾ ದಂಡೆಯತ್ತ...!

ಸಹ್ಯಾದ್ರಿ ಶ್ರೇಣಿಯ ಮೇಲೆ ಹಚ್ಹ ಹಸುರಿನಿಂದ ಕಂಗೊಳಿಸುರೇ ಶಿವಮೊಗ್ಗ.. ಈ ಊರನ್ನು ಮರೆತರೆ ಮಲೆನಾಡಿನಸೌಂದರ್ಯ ಸಂಪೂರ್ಣವಾಗಲಿಕ್ಕಿಲ್ಲ.! ಮಳೆಗಾಲದಲ್ಲಿ ದಾ ಜಿಟಿಜಿಟಿಯೆನ್ನುವ ಮಳೆ , ನೋಡಲು ತುಂಬಾ ಆಹ್ಲಾದಕರ.! ಪಾಪ ಅದನ್ನು ಸದಾ ಅನುಭವಿಸುವ ಅಲ್ಲಿಯವರ ಸ್ಥಿತಿ?! ಆ ಮಳೆಗೆ ಹಿಮ್ಮೇಳದಂತಿರುವ ಚಳಿ, ಬಿಸಿ ಕಾಫಿಯನ್ನು ನೆನಪಿಸುತ್ತದೆ. ಹಾಗೆಆ ಮಲೆನಾಡಿಗೆ ಹೋದಾಗಲೆಲ್ಲಾ ಅಲ್ಲಿಯ ಪ್ರಕೃತಿ ಯ ಸೊಬಗು ಕಂಡು ಕುವೆಂಪು ಕವನ, ಕಾದಂಬರಿಗಳ ಸಾಲುಗಳು ಒಂದರಮೇಲೊಂದರಂತೆ ಬರುತ್ತದೆ. ತೇಜಸ್ವಿಯ ಸಾಹಸ ಕಥೆಗಳ ವರ್ಣನೆ ಕಣ್ಣಿಗೆ ಕಟ್ಟುತದೆ.

ಹಲವು ಬಾರಿ ಈ ಊರಿಗೆ ಹೋಗಿರುವೆನಾದರೂ,MSc ದಿವಸದಲ್ಲಿ presentation ಗೆ ಅಂತ ಕುವೆಂಪು ಯುನಿವೆರ್ಸಿಟಿ ಗೆಭೇಟಿಗೊಟ್ಟ ಕ್ಷಣ ಮರೆಯಲಾಗದ್ದು!!

ನಾವು ಹದಿನಾರು ಜನ ಗೆಳೆಯ, ಗೆಳತಿಯರು ಮೂರೂ ದಿವಸದ ವಿಜ್ಞಾನ ಸಮಾವೇಶಕ್ಕೆ ಹೊರಡಲು ತಿರ್ಮಾನಿಸಿದ್ದೆವು.

ಹಾಗೆ ಸಮಾವೇಶದ ಮುನ್ನಾ ದಿನ ಮಧ್ಯಾಹ್ನದ ಹೊತ್ತಿಗೆ ಹೊರಡುವುದು ಅಂದುಕೊಂಡು ಬಸ್ ಸ್ಟಾಂಡಿಗೆ ಬಂದಾಗ, ನಾಲ್ಕು ಜನಹುಡುಗಿಯರು ಕಾಣಲಿಲ್ಲ. ಅವರಲ್ಲೊಬ್ಬಳಂತೂ ಸಮಯ ಪ್ರಜ್ಞೆ ಗೆ ಹೆಸರಾದವಳು ಬೇರೆ! ಇಲ್ಲಿ ಉಳಿದ ಹುಡುಗಿಯರುಅಸಮಾದಾನಗೊಂಡು ಕಿರಿಕ್ ಮಾಡಲಾರಂಬಿಸಿದರು. ಕಾಲ್ ಮಾಡಿದಾಗ ಅವರು shimoga ಬಸ್ಸಲ್ಲಿ ಪ್ರಯಾಣಆರಂಭಿಸಿಯಾಗಿತ್ತು! ಅದು ಕೇಳಿದ ನಾರಿಮಣಿಗಳಿಗೆ ಸಿಟ್ಟೋ ಸಿಟ್ಟು! ಮತ್ತೆ ವಿಚಾರಿಸಿದಾಗ ಗೊತ್ತಾಗಿದ್ದು, ಅವರು ತಮ್ಮಹೊರಲಾಗದ ಲಗೇಜ್ ನೊಂದಿಗೆ ಬಸ್ ಸ್ಟಾಂಡಿಗೆ ಬಂದಾಗ, ಕಂಡಕ್ಟರ್ ನವರು ಎಲ್ಲಿಗೆ ಅಂತ ಕೇಳಿ, ಅವರ ಲಗೇಜನ್ನು ಬಸ್ಸಲ್ಲಿಇಟ್ಟುಬಿಟ್ಟಿದ್ದರು! ಬಸ್ ಬೇರೆ moove ಆಗಲು ಪ್ರಾರಂಬಿಸಿದಾಗ, ಏನು ತೋಚದೆ ಹತ್ತಿಬಿಟ್ಟರು! ಇದನ್ನು ಕೇಳಿದ ಉಳಿದ ನಮ್ಮಗೆಳತಿಯರ ಸಿಟ್ಟೆಲ್ಲ ಕ್ಷಣ ಮಾತ್ರದಲ್ಲಿ ಕರಗಿ, ಅನುಕಂಪದಿಂದ ಮರುಗಿದರು! ಪಾಪ ಅವರಿಗೆ ಬೋರಾಗಬಹುದೆಂದು!!

ಹಾಗೆ ನಾವೆಲ್ಲಾ ಬಸ್ ಹತ್ತಿ, ಸೀಟಿನಲ್ಲಿ ಕೂತಾಗ ಆ ಬಸ್ ಅರ್ಧ ತುಂಬಿಯಾಗಿತ್ತು! ಅಷ್ಟು ಸಣ್ಣ ಬಸ್!

ಹೀಗೆ ನಮ್ಮ ಬಸ್ಸು ಒಂದೊಂದೇ ಊರನ್ನು ಹಿಂದಿಕ್ಕಿ ಮತ್ತೊಂದು ಊರಿಗೆ ದಾಪು ಗಾಲಿಡುತಿತ್ತು.. ಹಾಗೆ ಉಡುಪಿ, ಮಣಿಪಾಲ್ ಎಲ್ಲ ದಾಟಿ, ಹೆಬ್ರಿಯನ್ನೂ ದಾಟಿ, ಆಗುಂಬೆ ಘಾಟಿ ಹತ್ತಲು ಆರಂಬಿಸಿತ್ತು! ಅದರಲ್ಲಿದ್ದ ತುಂಬಾ ಜನರಿಗೆ shimoga ಕಡೆ ಅದು ಪ್ರಥಮ ಪ್ರಯಾಣವಾಗಿತ್ತು! ಹಾಗೆ ಅಲ್ಲಿಯ ಪ್ರಕೃತಿ ರಮಣೀಯ ದೃಶ್ಯಕ್ಕೆ ಮಾರು ಹೋಗಿದ್ದರು! ಕೆಲವರಂತೂ ಬಸ್ಸು ಸಪೂರದ ದಾರಿಯಲ್ಲಿ ಹತ್ತುತಿರಬೇಕಾದರೆ, ಕೆಳಗೆ ತಲೆಯ ಬೈತಲೆಯಂತೆ ಕಾಣುತಿದ್ದ ಹೆಬ್ರಿಯ ರಸ್ತೆಯನ್ನು ನೋಡಿ ಕೌತುಕಗೊಂಡಿದ್ದರು. ಕೊನೆಯ ಸೀಟಲ್ಲಿ ಕೂತ ಕೆಲವರು ಬಸ್ಸಿನ ಕಿಟಕಿಯಿಂದ ಕೆಳಗೆ ನೋಡಿ, ಹೆದರಿಬಿಟ್ಟಿದ್ದರು! ಏಕೆಂದರೆ ಆಳವಾದ ಪ್ರಪಾತವನ್ನು ಕಂಡ ಅವರಿಗೆ ಜೀವ ಹೋದಂತಾಗಿತ್ತು.! ಹಸಿರು ತಳಿರಿನಿಂದ ಆವೃತವಾದ ಪ್ರಕೃತಿಯ ಮಧ್ಯ ಹಾದು ಹೋಗುವಾಗ ಒಂಥರಾ ಚಳಿಯ ಅನುಭವ ವಾಗಲು ಪ್ರಾರಂಭಿಸಿತ್ತು. ಹೀಗೆ ಬೆಂಕಿಪೊಟ್ಟಣ ದಂತಿದ್ದ ನಮ್ಮ ಬಸ್ಸು ಅಂತು ಶಿವಮೊಗ್ಗ ತಲುಪಿತು..!

ನಾವೆಲ್ಲಾ ಲಗೇಜನ್ನು ಹೊತ್ತು ಬಸಿನಿಂದಿಳಿಯುವಾಗ ನಮ್ಮನ್ನು ಅಲ್ಲಿಯ ಜನ ಹೊಸ ಗ್ರಹದಿಂದ ಬಂದ ಜೀವಿಗಳ ಹಾಗೆ ನೋಡಲುಆರಂಭಿಸಿದರು.. ಅಂದ ಹಾಗೆ ಅವರು ನೋಡುತಿದ್ದದು ನಮ್ಮನ್ನಲ್ಲ, ಹುಡುಗಿಯರನ್ನು! ಅವರ ನೋಟ ಕಂಡ ನಮ್ಮ ಗೆಳತಿಯರುಕಕ್ಕಾಬಿಕ್ಕಿ, ಕೆಲವರಿಗಂತೂ ಸಿಟ್ಟೇ ಸಿಟ್ಟು.!! ಹಾಗೂ ಹೀಗೂ ಅವರ ನೋಟವನ್ನು ತಪ್ಪಿಸಿ, ನಮಗಿಂತ ಬೇಗ ಮುಟ್ಟಿದ ನಮ್ಮಗೆಳತಿಯರನ್ನು ಹುಡುಕಿದಾಗ ಅವರ ಸ್ಥಿತಿ ಭಯಂಕರ! ತಮ್ಮ ಬ್ಯಾಗುಗಳನ್ನು ಇಡಲು ಆಗದೆ ಹೊರಳು ಆಗದೆ ಒಂದು ಕಡೆಚಡಪಡಿಸುತಿದ್ದರೆ, ಇನ್ನೊಂದು ಕಡೆ ಜನ ಅವರನ್ನು ನುಂಗುವಂತೆ ನೋಡುತಿದ್ದರು. ಅವರಿಗೆ ನಮ್ಮನ್ನು ಕಂಡ ಕೂಡಲೇ, ಹೋದಜೀವ ಬಂದಂತೆ ಭಾಸವಾಯಿತೇನೋ! ಏಕೆಂದರೆ ಚಿಂತಕ್ರಾಂತರಾಗಿದ್ದ ಅವರ ಮುಖ ಅರಳಿದಂತೆ ಕಂಡಿತು ! ಹಾಗೆ ಅವರನ್ನೂಕೂಡಿ ಹಂದಿ, ಕತ್ತೆಗಳ ಗುಂಪನ್ನು, ಮತ್ತೆ ನಮ್ಮನ್ನೇ ತಿನ್ನುವಂತೆ ನೋಡುತಿದ್ದ ಜನರನ್ನೂ ದಾಟಿ ಮುಂದೆ ಹೋಗುವಾಗ, ಜನಫುಲ್ ತುಂಬಿರುವ ಬಸ್ಸೊಂದು ರೊಯ್ಯನೆ ಬಂದು ತಿರುಗಿಸಿ ನಿಂತಾಗ ಗೊತ್ತಾಗಿದ್ದು ಅದೇ ಬಸ್ಸು ನಮ್ಮನ್ನು ಕುವೆಂಪುಯುನಿವೆರ್ಸಿಟಿಗೆ ಕೊಂಡೊಯ್ಯುದು ಅಂತಾ! ಅದನ್ನು ನೋಡಿದಾಗಲೇ ನಮ್ಮ ಗುಂಪಿಗೆ ತಲೆ ತಿರುಗಿದಂತಾಯಿತು!

ಅಂತು ಹೇಗಾದರೂ ಮಾಡಿ ಬಸ್ಸಲ್ಲಿ ಹತ್ತಿದೆವು!!!

(ಮುಂದೇನಾಯಿತು ಅಂತ ಮುಂದಿನ ವಾರದ ಬ್ಲಾಗಲ್ಲಿ ಬರೆಯುತ್ತೇನೆ! ಅಲ್ಲಿಯ ವರೆಗೂ take care!!! )



Monday, 13 February 2012

ಪ್ರೀತಿ ಇಲ್ಲದ ಮೇಲೆ...!

ಪ್ರೀತಿ ಅನ್ನುವುದು ಒಂದು ವಿಶಿಷ್ಟವಾದ ವಸ್ತು. ಇದು ವರ್ಷದ ಮುನ್ನೂರೈವತ್ತೈದು ದಿವಸಾನು ಇರಲೇಬೇಕಾದದ್ದು. ಅದಿಲ್ಲದೇ ಹೋದರೆ ಯಾವೊಬ್ಬನೇ ವ್ಯಕ್ತಿ ಬದುಕಲು ಸಾಧ್ಯವಿಲ್ಲ.

ಅಂದ ಹಾಗೆ ಪ್ರೀತಿಗೆ ಹಲವು ಮುಖ ಇದೆ. ಅದರಲ್ಲಿ ತಾಯಿಯ ಪ್ರೀತಿ ವಾತ್ಸಲ್ಯದಿಂದ ಕೂಡಿದರೆ, ಸಹೋದರಿಯ ಪ್ರೀತಿ ವಿಶ್ವಾಸದಿಂದ ಕೂಡಿರುತ್ತೆ. ತಂದೆಯ ಪ್ರೀತಿ ಭರವಸೆಯ ಮೇಲೆ ನಿಂತಿರುತ್ತದೆ. ಹೀಗೆ ಹಲವು ರೀತಿ. ಗೆಳೆಯ/ಗೆಳತಿಯ ಪ್ರೀತಿ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ, ನೆಮ್ಮದಿ ಎಲ್ಲವನ್ನೂ ಕೊಡುತದೆ!

ಕೆಲವೊಮ್ಮೆ ನಾವು ಭ್ರಾಮಕ ಜಗತ್ತಿನಲ್ಲಿ ನಿಷ್ಕಲ್ಮಶ ಪ್ರೀತಿಯನ್ನು ತಪ್ಪಾಗಿ ಅರ್ಥೈಸುವುದುಂಟು.. ಹುಡುಗಿಯೊಬ್ಬಳು ಹುಡುಗನೊಂದಿಗೆ ನಕ್ಕು, ಮಾತಾಡಿದರೆ ಕೆಲವೊಮ್ಮೆ ಅವ ಗ್ರಹಿಸುವುದೇ ಬೇರೆ, ಇನ್ನು ಅವ ಹಾಗೆ ತಿಳಿಯದಿದ್ದರೂ, ಬೇರೆಯವರು ಬಣ್ಣಕಟ್ಟಿ ಇಲ್ಲದ್ದನ್ನೆಲ್ಲ ಪ್ರಚಾರ ಮಾಡುತ್ತಾರೆ. ಮತ್ತೆ ಕೆಲವರಿಗೆ attraction, infatuation ನನ್ನೇ ಪ್ರೀತಿ ಎಂದು ಗ್ರಹಿಸಿಬಿಡುತ್ತಾರೆ.
ಒಟ್ಟಿನಲ್ಲಿ ಪ್ರೀತಿ ಅನ್ನುವುದು ಅನೂಹ್ಯವಾದ ಒಂದು ಭಾವನೆ. ಅದು
ಎರಡು ಹೃದಯಗಳ ಮಧ್ಯ ಗಾಡವಾಗಿ ಬಂಧಿಸಲ್ಪಡುವಂತದ್ದು. ಅದು ಕೆಲವೊಮ್ಮೆ ಪ್ರೇಮವಾಗಿ ಮಾರ್ಪಾಡಾಗುತ್ತದೆ. ಆದರೆ ಪ್ರೀತಿಯೊಂದು ಸದಾ ಬೆನ್ನಿಗಿದ್ದರೆ ನಮಗೆ ಯಾವುದೇ ಮಾನಸಿಕ ಕ್ಲೇಶ ಇರಲು ಸಾಧ್ಯವಿಲ್ಲ.. ಪ್ರೀತಿಯು ಕೈ ತಪ್ಪಿದಾಗ ಅದೆಷ್ಟೋ ಜನ ಜೀವನವನ್ನೇ ಕೊನೆಯಾಗಿಸಿದ್ದುಂಟು. ಮತ್ತೆ ಕೆಲವಾರು ಜನರು ಪ್ರೇಮ ಕೈತಪ್ಪಿದ ದುಃಖವನ್ನು ಮರೆಯಲು positive ಆಗಿ ಕೆಲಸ ಮಾಡಿ, ಅದರಲ್ಲಿ ಯಶಸ್ಸು ಕಂಡವರಿದ್ದಾರೆ. ರಾಜಕಪೂರ್ ನ mera naam joker, ಪುಟ್ಟಣ್ಣ ಕಣಗಾಲ್ ನವರ ಮಾನಸ ಸರೋವರ ಸಿನಿಮಾ ಇದಕ್ಕೆ ತಕ್ಕ ಉದಾಹರಣೆ.

ಸಲ್ಮಾನ್, ರೇಖಾ ಹೀಗೆ ಬರೆದರೆ ಮುಗಿಯದಷ್ಟು ಜನ ಪ್ರೇಮವನ್ನು ಉಳಿಸಿಕೊಳ್ಳಲಾಗದವರಿದ್ದಾರೆ. ಮತ್ತೆ ಕೆಲವರು ಪ್ರೇಮ ವನ್ನು ನಿವೇದಿಸಿ ಕೊಳ್ಳಲಾಗದೆ ಕವಿ ಕೀಟ್ಸ ನಂತೆ ಸತ್ತವರಿದ್ದಾರೆ.. ಅದೆಲ್ಲಕಿಂತ ಹೆಚ್ಹಾಗಿ ಕಾಡುವ ಒಂದು ಕತೆ ಅಮೃತಾ ಪ್ರೀತಂ ನದ್ದು ಪಂಜಾಬಿನ ಕವಯತ್ರಿ ತನ್ನ ಪ್ರೇಮಿಯನ್ನು ಅರಸುತ್ತಾ ಮುಂಬೈ ತಲುಪಿ ಅವನಲ್ಲಿ ಪ್ರೇಮ ನಿವೇದಿಸಿದಾಗ, ಅದನ್ನು ಆತ ತಿರಸ್ಕರಿಸುತ್ತಾನೆ. ಬಾಲ್ಯದಿಂದಲೂ ಅವನ ಕವನ ಗಳನ್ನು ಓದಿ ಮನಸೋತು, ಕವಿಯಲ್ಲೇ ಅನುರಕ್ತಳಾದ ಈಕೆ, ಬಂದ ದಾರಿಗೆ ಸುಂಕವಿಲ್ಲವೆಂದು ಬಗೆದು ಹಿಂತಿರುಗಿದಳು. ಆತ ಬೇರ್ಯಾರು ಅಲ್ಲ. ಕಭಿ ಕಭಿಯಂತ ಹಾಡು ಬರೆದ ಖ್ಯಾತ ಕವಿ ಸಾಹಿರ್ ಲೂಧಿಯಾನ್ವೀ. ಇವಳು ಅದೇ ನೋವಿನಲ್ಲಿ ಹಿಂತಿರುಗಿದಾಗ ಸಿಕ್ಕಿದ್ದು ಅವಳನ್ನೇ ಪ್ರೀತಿಸುತಿದ್ದ ಕಲಾಕಾರ ಇಮ್ರೋಜ್.!! ಪ್ರೀತಿ ಅನ್ನುವುದು ಹಾಗೆ ನಾವಂದು ಕೊಂಡಂತೆ ಇರಲ್ಲ.

ಶುದ್ದ ಪ್ರೀತಿ ಅನ್ನುವುದು 'ಮಾರ್ಕೆಟ್' ಪ್ರಪಂಚದ ಬುಸ್ಸಿನೆಸ್ಸ್ ಅಲ್ಲ. ಸಂತ ವೆಲೆಂಟೈನನ ನಿಜವಾದ ಧ್ಯೇಯಕ್ಕೆ ಅಪಚಾರ ಎಸಗುವಂತದಲ್ಲ. ಷೇಕ್ಸಪಿಯರ್ ಹೇಳಿದ ಹಾಗೆ ಅದು ಕಾಲಕ್ಕೆ ತಕ್ಕಂತೆ ಬದಲಾಗದೆ ಶಾಶ್ವತ ವಾಗಿರುವಂತದ್ದು(fixed mark). 'Love is not time's fool'.

ನಾವಾದರೋ, 'ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲ್ಲಿ' ಎನ್ನುವ ಕವಿವಾಣಿ ಯಂತೆ ' ನಮ್ಮೊಳಗೇ ಇರುವ ಪ್ರೀತಿ ಸ್ನೇಹಗಳನ್ನು ಗುರುತಿಸಲಾರೆವು '. ಹೀಗೆ ಪ್ರೀತಿ ಅನ್ನುವುದು ಮರುಭೂಮಿಯಲ್ಲಿನ ಓಯಸಿಸ್ ನಂತೆ!

'ಪ್ರಿತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ?,ಮೋಡ ಕಟ್ಟಿತು ಹೇಗೆ? ಹನಿಯೊಡೆದು ಮಳೆಯ ಸುರಿಸಿತು ಹೇಗೆ?'

ಪ್ರೀತಿಯಿಲ್ಲದ ಮೇಲೆ ಬ್ಲಾಗನ್ನು ಬರೆಯುವುದು ಹೇಗೆ, ಮತ್ತೆ ನೀವು ಓದುವುದು ಹೇಗೆ!?

ಅಂದ ಹಾಗೆ ಮತ್ತೊಬ್ಬ ಕವಿ 'ಪ್ರೀತಿಯಿಲ್ಲದ ಮೇಲೆ ನಾವೇನು ಮಾಡಲಾರೆವು, ದ್ವೇಷವನ್ನೂ ಸಹ' ಅಂದಿದ್ದಾನೆ.

Monday, 6 February 2012

ಕಾವೇರಿಯ ನಾಡಲ್ಲಿ...


ಒಂದು ಕಾಲದಲ್ಲಿ ಅದು ನನ್ನ ಬೇಸಗೆಯ ಊರಾಗಿತ್ತು.. ಅದು ನಾನು ಇಷ್ಟಪಡುವ ಎರಡನೆಯ ಊರು. ಅಲ್ಲಿಯ ಚಳಿಗೆತತ್ತರಿಸಿದ್ದೇನೆ! ಕಾಫಿಯ ಕಂಪಿಗೆ ಮನಸೋತಿದ್ದೇನೆ! ಅಲ್ಲಲ್ಲಿ ಹರಿಯುವ ನೀರಿನ ಝರಿಗಳನ್ನು ಕಂಡುಬೆರಗುಗೊಂಡಿದ್ದೇನೆ! ಹೀಗೆ ನನಗು ಈ ಕಿತ್ತಳೆ ನಾಡಿನ ಸಂಬಂದ ಈಗಲೂ ಮುಂದುವರಿದಿದೆ. ಪುಷ್ಪಗಿರಿ ಬೆಟ್ಟದತುದಿಯಲ್ಲಿರುವ ಮರಗಳ ರಾಶಿ, ಮುಂಗಾರಿನ ಮಳೆಗೆ ಹೇಗೆ ಕಂಗೊಳಿಸುತ್ತದೆಂದರೆ ಸ್ವತಹ ಯೋಗರಾಜ್ ಭಟ್ಅದೇ ಹೆಸರಿನ ಫಿಲಂ ತೆಗೆದಿದ್ದಾರೆ.. ಹೀಗೆ ಪ್ರಕೃತಿಯ ಮಡಿಲಲ್ಲಿನ ಸೌಂದರ್ಯಕ್ಕೆ ಮಾರು ಹೋಗದವರುಯಾರಿದ್ದಾರೆ.?

ಕೊಡಗು ಅಂದಾಗ ಅಬ್ಬಿಯ ಭೋರ್ಗರೆತ ಕಣ್ಣಿನ ಮುಂದೆ ಬಂದು ನಿಲ್ಲುವುದು ಸಹಜ. ಅದೆಷ್ಟು ಬಾರಿ ಹೋದರೂ, ಆಜಲಪಾತ ನಮಗೆ ಬೋರೆನಿಸುವುದೇ ಇಲ್ಲ. ಮಾತ್ರವಲ್ಲ ಮತ್ತೆ ಮತ್ತೆ ಹೋಗಬೇಕೆನಿಸುತ್ತದೆ. ಒಮ್ಮೆ ನಾನು ನನ್ನಗೆಳೆಯರೊಟ್ಟಿಗೆ ಮಡಿಕೇರಿಯಿಂದ ನಡಕೊಂಡೆ 9 km ಹೋಗಿ ಅಲ್ಲಿಯ ಗುಡ್ಡ ಹತ್ತಿ, ನೀರಿನಲ್ಲಿ ಈಜಾಡಿ, ನಲಿದು ಪುನಃನಡಕೊಂಡೆ ಹಿಂತಿರುಗಿ ಬಂದಿದ್ದೆವು. ಆ ದಾರಿಯಾಗಿ ಹೋಗುವಾಗ ಮತ್ತು ಬರುವಾ ವಿಧ ವಿಧದ ಮರಗಳು, ಅದರಬಣ್ಣ ಬಣ್ಣದ ಹೂವುಗಳು, ಆ ಹೂವುಗಳತ್ತ ಆಕರ್ಷಣೆಗೊಂಡು ಮುತ್ತಿಕುವ ತರ ತರದ ಪತಂಗಗಳು, ಮತ್ತೆನೊಣಗಳನ್ನು ಬೆನ್ನಟ್ಟಿ ತಿನ್ನುವ ವಿಧ ವಿಧದ ಹಕ್ಕಿಗಳು ಈಗಲೂ ಸ್ಮೃತಿ ಪಟದಲ್ಲಿ ಹಚ್ಹ ಹಸಿರಾಗಿದೆ.

ಮತ್ತೊಮ್ಮೆ ಹೋದಾಗ ನವೋದಯ high school ವಿದ್ಯಾರ್ಥಿ ನೀರಿನಲ್ಲಿ ಬಿದ್ದು ನೀರು ಪಾಲಾಗಿದ್ದ. ಒಂದು ಕಡೆಅಬ್ಬಿಯನ್ನು ನೋಡಲಾಗದ ಬೇಸರ, ಮತ್ತೊಂದು ಕಡೆ ಅರಳಬೇಕಾದ ಮೊಗ್ಗು ನೀರಲ್ಲಿ ಮುರುಟಿ ಹೋಯಿತಲ್ಲಅನ್ನೋ ನೋವು..

ಮತ್ತೆ ಮಡಿಕೇರಿಯ ರಾಜ ಸೀಟಿನ ಸೂರ್ಯಾಸ್ತಮಾನ ನೋಡದೆ ಹಿಂತಿರುಗಿ ಬರುವುದಾದರೂ ಹೇಗೆ..?! ಗುಡ್ಡಗಳನಡುವೆ ಜಾರಿ ಹೋಗುವ ಸೂರ್ಯನನ್ನು, ಹುಲ್ಲಿನ ರಾಶಿಯ ಮೇಲೆ ಕೂತು ನೋಡುವುದೇ ಒಂಥ ಕುಷಿ. ಬಹುಶಅದಕ್ಕಾಗಿಯೇ, ರಾಜ ರಾಣಿಯರು ಸಹ ಇದೇ ಜಾಗದಲ್ಲಿ ಕೂತು ಸಂಜೆಯ ಸವಿಯನ್ನು ಸವಿದಿರಬಹುದು.. ಆದರೆಅಲ್ಲಿಯೆ ಹೊರಗೆ ಸಿಗುವ ಉಪ್ಪು ನೀರಲ್ಲಿ ಹಾಕಿದ ನೆಲ್ಲಿಯ ಸವಿಯನ್ನು ಅವರು ಸವಿದಿರಲಿಕ್ಕಿಲ್ಲ. ಆ ನಿಟ್ಟಿನಲ್ಲಿ ನಾವುಪುಣ್ಯವಂತರು.

ಇನ್ನು ಕಾಫಿ ತೋಟದ ಮಧ್ಯ ಕಂಗೊಳಿಸುವ ಸೋಮವಾರಪೇಟೆ ಮಡಿಕೇರಿಯ ಉತ್ತರಕ್ಕೆ ಇದೇ. ಅದರ ಹೆಸರೇ ಹೇಳುವ ಹಾಗೆ ಸೋಮವಾರ ಸಂತೆ ನಡೆಯುವ ಊರು. ಅವತ್ತು ಊರು ತುಂಬ ಜನರೇ ಜನರು. ವಿವಿಧ ವಸ್ತುಗಳನ್ನು ಕೊಳ್ಳಲು ಬರುವ ಕೂಲಿ ಕಾರ್ಮಿಕರು ಒಂದೆಡೆಯಾದರೆ, ತಮ್ಮದೇ ಗತ್ತಿನಲ್ಲಿ ಬಂದು ತಮಗೆ ಬೇಕಾದದ್ದನ್ನು ತಗೊಂಡು ಜೀಪಲ್ಲಿ ಹಾಕೊಂಡು ಹೋಗುವ ಎಸ್ಟೇಟ್ owner ನವರು ಮತ್ತೊಂದೆಡೆ.ಹೀಗೆ 6 ದಿವಸ ಮಲಗಿ ಕೊಂಡು ಇರುವ ಊರು ಅವತ್ತು ತುಂಬಿ ತುಳುಕುತಿರುತದೆ. ಒಂದು ಟೇಬಲ್ಲಿನಲ್ಲಿ 4 ಜನರು ಕುಳಿತು ತಿನ್ನುವ ಮಲಯಾಳಿಗರ, ಉಡುಪಿ ಭಟ್ಟರ ಹೋಟೆಲ್ ನಲ್ಲಿ ಅವತ್ತು 6 ಜನ ಕೂತು ತಿನ್ನುತ್ತಾರೆ.

Summer vacation ಮಾತ್ರ ಈ ಊರಿನಲ್ಲಿ ಖುಷಿಯೋ ಖುಷಿ! ಊರಿನ ಬಿಸಿಲಿನ ಝಲಕ ಇಲ್ಲ. ಎಲ್ಲೋ ದೂರದಬೆಂಗಳೂರಿನಲ್ಲೋ , ಮೈಸೂರಲ್ಲೋ ಅಥವಾ ಮಂಗಳೂರಲ್ಲೋ ಕಲಿಯುತಿರುವ ಅಲ್ಲಿಯ ಮಕ್ಕಳು ತಮ್ಮೂರಿಗೆಬಂದು, ಅವರ ಸಂಬಂದಿಕರ ಮದುವೆ ಮತ್ತಿತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಪೂರ್ಣ ಖುಷಿ ಪಡುತ್ತಾರೆ.

ಒಟ್ಟಿನಲ್ಲಿ ಹಲವು ನೆನಪುಗಳನ್ನು ತೆರೆದಿಡುವ ಈ ಊರು ಡಿಸೆಂಬರ್-ಜನವರಿಯಲ್ಲಿ ಚಳಿಯ ಉಗ್ರ ರೂಪವನ್ನು ತೋರಿಸುತ್ತದೆ. ಅದೆಷ್ಟು ಚಳಿ ಅಂದರೆ, ಬೆಳಗಿನ ಕಾಫಿಗೆ ಹುಡಿಯೋ, ಸಕ್ಕರೆಯೋ ಹಾಕುವ ಅವಶ್ಯಕತೆಯಿಲ್ಲ. ಸ್ಪೂನಲ್ಲಿ ತೆಗೆಯುವಾಗಲೇ ಕೈ ನಡುಗಿ ತಾನಾಗಿಯೇ ಬೀಳುತ್ತದೆ.. ತೆಂಗಿನೆಣ್ಣೆ ಗಟ್ಟಿಯಾಗಿ ಮೇಣದ ತರಕಾಣುತಿರುತ್ತದೆ.

ಹಾಗೆ ಕುಶಾಲನಗರದ ಆನೆಯ ಸಫಾರಿ, ಮತ್ತೆ ಕಾವೇರಿ ನದಿಯ ತವರೂರು ತಲಕಾವೇರಿ!

ಎಲ್ಲವು ಹೋದಷ್ಟು ಬಾರಿ ಹೊಸ ಉಲ್ಲಾಸ ಮೂಡಿಸುತ್ತದೆ..