Tuesday, 31 January 2012

ಆಡಿಸುವಾತನ ಕೈ ಚಳಕದಲಿ ಎಲ್ಲ ಅಡಗಿದೆ...

ಮುಂಜಾನೆಯ ಮಸೀದಿಯ ಆದಾನ್ (ಬಾಂಗ್) ಕರೆಗೆ ಎಚ್ಹೆತ್ತ ಪುಟ್ಟ ಮಗು ಆ ಶಬ್ದ ಬಂದ ಕಡೆಗೆ ನೋಡಿದಾಗಮಸೀದಿಯ ಮಿನಾರದ ಕಡೆಯಿಂದ ಆ ಶಬ್ದ ಕೇಳಿಸುತಿದೆ.. ದೇವಸ್ಮರಣೆಯ ಪದಗಳು! ಅಲ್ಲೇ ಸುತ್ತ ಮುತ್ತ ಬೆಳಗಿನಮುಸುಕು ಬೆಳಕಿನಲ್ಲಿ, ಚಿಲಿಪಿಲಿಗುಟ್ಟುತಿರುವ ಹಕ್ಕಿಗಳೇ ಆ ದೇವಸ್ಮರಣೆ ಮಾಡುತಿರಬೇಕೆಂದು ತಿಳಿಯುವ ಮುಗ್ದಮಗು, ಆ ಹಕ್ಕಿಯನ್ನು ಕರೆದು '',ಹೇಯ್ ದೇವ ಸ್ಮರಣೆಯಲ್ಲಿರುವ ಗಿಳಿಯೇ ನೀ ಸ್ವಲ್ಪ ನಿಲ್ಲು!! ಮಿನಾರದಎತ್ತರದಲ್ಲೀದ್ದೀಯಲ್ಲ, ಆಕಾಶದ ಆ ಕಡೆ ಇರುವ ಸ್ವರ್ಗ ದಲ್ಲಿನ ಅದ್ಭುತಗಳು ನಿನಗೆ ಕಾಣಿಸುತಿದೆಯ? ಎಂದುಕೇಳುತ್ತದೆ..


ಈ ಮಗುವಿಗೆ ಸ್ವರ್ಗದ ಬಗೆ ಕುತೂಹಲ ಯಾಕಿರಬಹುದು ಅಂತ ಯೋಚಿಸುವಾಗಲೇ, ಆ ಮಗು ಗಿಳಿಯೋಟ್ಟಿಗೆಇನ್ನೊಂದು ಪ್ರಶ್ನೆ ಕೇಳುತ್ತದೆ. ಆ ಸ್ವರ್ಗದಲ್ಲಿ ಯಾರೆಲ್ಲ ಇದ್ದಾರೆ ಅಂತ ಸ್ವಲ್ಪ ನೋಡುತ್ತೀಯ? ನನ್ನತಂದೆಯನ್ನೆಲ್ಲಾದರು ಕಾಣುತ್ತೀದ್ದೀಯ? ಹಾಗಾದರೆ ಅವರ ಹತ್ತಿ ನನ್ನ ತಾಯಿ ಇರಬೇಕಲ್ಲ? ನನ್ನ ಅಕ್ಕ ಹೇಳಿದ್ದಾರೆಅವೆರೆಲ್ಲ ಅಲ್ಲೇ ಇದ್ದಾರೆ ಅಂತ, ಮದರಸದ ಗುರುಗಳೂ ಅದನ್ನೇ ಹೇಳಿದ್ದಾರೆ ಅಂತ ಆ ಮಗು ಗಿಳಿಯಲ್ಲಿಹೇಳಿಕೊಳ್ಳುತ್ತದೆ.. ಮತ್ತೆ ಹೇಳುತ್ತೆ, ಎಲ್ಲಿದೆ ಆ ಸ್ವರ್ಗ? ನನಗೂ ನನ್ನ ತಂದೆ ತಾಯಿರುವ ಸ್ವರ್ಗ ಕ್ಕೆ ಹೋಗಬೇಕು.

ಇದು ನಾನು ಸಣ್ಣ ಇರುವಾಗ ಕೇಳಿದ ಒಂದು ಮಲಯಾಳಂ ಹಾಡಿನ ಭಾವಾರ್ಥ. ತಬ್ಬಲಿ ಮಗುವಿನ ಮೂಕ ವೇದನೆಯನ್ನು ಕವಿಯು ಹಾಡಿನ ಮುಖಾಂತರ ಹೇಳಿದ್ದಾರೆ. ಇಲ್ಲಿ ಸ್ವತಃ ಕವಿ, ಮಗುವಾಗಿ ವಿವಿಧ ರೂಪಕಗಳನ್ನು ಬಳಸಿಪರಿಣಾಮಕಾರಿಯಾಗಿ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.. ಅನಾಥ ಪ್ರಜ್ಞೆಯ ಅಗಾಧತೆ ಈ ಸಣ್ಣ ಹಾಡಿನಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಅದೇನೇ ಇರಲಿ ನನ್ನ ಚಿಕ್ಕಪ್ಪನ ಮಗಳು ಅಂದರೆ ನನ್ನ ಸೋದರಿಯ ಗಂಡ ಮೊನ್ನೆ ಅಕಾಲ ಮೃತ್ಯುವಿಗೆ ತುತ್ತಾದಾಗ, ಆ ಪುಟ್ಟ ಮಕ್ಕಳು ಅದೇನನ್ನು ತಿಳಿಯದೆ, 'ನನ್ನ ತಂದೆಯನ್ನು ಎಲ್ಲಿ ಕರ್ಕೊಂಡು ಹೋದದ್ದು' ಅಂತ ಕೇಳಿದ ಮುಗ್ದಪ್ರಶ್ನೆಗೆ ನಮ್ಮಲ್ಲಿ ಕಣ್ನೀರಲ್ಲದೆ ಬೇರೆ ಉತ್ತರವಿರಲಿಲ್ಲ.

ಎಲ್ಲವೂ ವಿಧಿಯಾಟ!

Monday, 23 January 2012

ಪುಟ್ಟ ಗೆಳತಿಯ ಕುರಿತು...

ನಾನು ಕಾಲೇಜಿನಲ್ಲಿ ಸ್ವಯಂ ಘೋಷಿತ ಕವಿ ಯಾಗಿದ್ದೆ. ಅದಕ್ಕೆ ತಕ್ಕಂತೆ ಕೆಲವಾರು ಲೈನ್ ಗಳನ್ನೂ ಬರೆದು ಕವಿತೆ ಅಂತ ಕವಿಗೋಷ್ಠಿಯಲ್ಲಿ ಓದ್ತಾ ಇದ್ದೆ. ಯಾರಿಗೆ ಗೊತ್ತು ಅದು ಪದ್ಯಯೋ(poem), ಅಥವಾ ಗಧ್ಯವೋ(prose) ಅಂತ. ಹೀಗೆ ನಾವು ಗೀಚಿದ್ದನ್ನು ಓದುವಾಗ ಕೇಳಲು ಜನ ಬೇಕಲ್ವಾ,ಅದಕ್ಕಾಗಿ auditorium ಹೊರಗೆ ನಿಂತು ಗೆಳೆಯರನ್ನು ಕರೆಯುತಿದ್ದೆವು. ಒಂದು ಸಲ ಹೀಗೆ ಹೊರಗೆ ನಿಂತು ಕರೆಯುವಾಗ pu student ಹೋಗ್ತಾ ಇದ್ರೂ. ಅವರನ್ನು ಕರೆದಾಗ, ಪಾಪ! ನನ್ನ ಮುಲಾಜಿಗೆ ಬಿದ್ದು ಇಬ್ಬರು ಹುಡುಗಿಯರು ಬಂದ್ರು. ಅದರಲ್ಲಿ ಒಬ್ಬಳಂತೂ ಇನ್ನು primary ಸ್ಕೂಲ್ ನವರ ಹಾಗೆ ಕಂಡ್ರೆ, ಮತ್ತೊಬ್ಬಳು high ಸ್ಕೂಲ್ ಗೆ ಹೋಗುವವರ ಹಾಗೆ ಕಾಣುತಿದ್ದಳು.

ಇರಲಿ, ಫುಲ್ ಕ್ಲೋಸ್ ಅಪ್ ಸ್ಮೈಲ್ ನೊಂದಿಗೆ ಎಂಟ್ರಿ ಕೊಟ್ರು.. ಹಾಗೆ ಕರೆದು ಸ್ವಲ್ಪ ಜನ ಆದಾಗ, ಪ್ರೊಗ್ರಾಮ್ ಸ್ಟಾರ್ಟ್ ಆಯಿತು. ಪ್ರೊಗ್ರಾಮ್ ಮುಗಿಯುವಾಗ ಅರ್ಧಕ್ಕಿಂತ ಜಾಸ್ತಿ ಜನ ಖಾಲಿಯಾಗಿದ್ದರೂ, ಪುಟ್ಟ ಪುಟಾಣಿಗಳು ಮಾತ್ರ ಹೋಗಿರಲಿಲ್ಲ. ಮತ್ತೆ refreshment ಗೆ ಅವರನ್ನು ಕರೆದ್ವಿ.. ಆನಂತರ ಅವರು ನಮ್ಮ ಯಾವುದೇ function ಗೆ permnent member ಆಗಿ ಬಿಟ್ಟರು. ,ಅಂದ ಹಾಗೆ ನಾನಂದು ಕೊಂಡದ್ದು, ಇಬ್ಬರು ಹಾಸ್ಟೆಲ್ ಹುಡುಗಿಯರು ಅಲ್ಲಿ ಬೋರಾಗುವುದಕ್ಕೆ ಇಲ್ಲಿ ಬರ್ತಾ ಇದ್ರೂ ಅಂತ.!

ಹೀಗೆ ಇರುವಾಗ ಒಂದು ಸಲ, ನನ್ನ ಹುಟ್ಟಿದ ಹಬ್ಬಕ್ಕೆ wish ಮಾಡಲು ಒಂದು ಕಾಲ್ ಬಂತು.. ಕಡೆ ಹುಡುಗಿಯ ಶಬ್ದ! ಅವಳು ಅದ್ಯಾವುದೋ? ಹೆಸರು ಹೇಳಿದಳು. ಯಾರಪ್ಪ ಅಂತ ನೆನಪಿಸಿದರೂ ತಲೆಗೆ ಹೊಳೆಯಲೇ ಇಲ್ಲ.. ಆದರೂ ಅವಳಲ್ಲಿ ಗೊತ್ತಿದ್ದವರ ಹಾಗೆ ನಟಿಸಿದ್ದೆ..

ಕೆಲವು ದಿವಸ ಬಿಟ್ಟು ಇಬ್ಬರು ಹುಡುಗಿಯರಲ್ಲಿ ಒಬ್ಬಳು ಸಿಕ್ಕಿದಾಗ, ಮಾತಾಡ್ತಾ ಗೊತ್ತಾಯಿತು ಇವಳೇ wish ಮಾಡಿದ ಹುಡುಗಿ. ಆಗಲೂ ಅವಳ ಹೆಸರು ಗೊತ್ತೇ ಇರಲಿಲ್ಲ..! ಮತ್ತೆ ಹೆಸರು ಮರೆತು ಹೋಗಲು ಇಲ್ಲ..! ಹೀಗೆ ನಮ್ಮ ಗೆಳೆತನ ಆರಂಭ.. ಈಗ ಅವಳನ್ನು ನೋಡದೆ ತುಂಬಾ ವರ್ಷಗಳಾದರೂ ಅವಳ ಹೆಸರು ನೆನಪಿಗೆ ಬಂದ ಕೂಡಲೇ, ಅದೇ ಪುಟ್ಟ ಮುಗ್ದ ಮುಖ ನೆನಪಾಗುವುದು. ನನ್ನ ಆಗಿನ ಗೆಳೆಯರನೇಕರು ಈಗ ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ ನನ್ನ ಸಹಪಾಟಿಯಲ್ಲದ, ನನಗಿಂತ ಚಿಕ್ಕವಳಾದ ಅವಳು , ಈಗಲೂ ನನ್ನ ತಂಗಿಯಂತೆ ಸದಾ ಕಾಲೆಳೆಯುತ್ತ ಮಾತಾಡುತ್ತ ಇರುತ್ತಾಳೆ..

ಮೊನ್ನೆ ಒಮ್ಮೆ ಅವಳು ಹೇಳಿದಳು ಅವಳಿಗೆ ಒಂದು ಪ್ರೊಪೋಸಲ್ ಬಂದಿದೆ ಅಂತ. ಇಬ್ಬರ ತಂದೆ ತಾಯಿಗೆ ಒಪ್ಪಿಗೆಯಾಗಿದೆಯಂತೆ. ಅದಕ್ಕೆ ನಾ ಕೇಳಿದೆ ನಿನಗೆ ಹೇಗೆ ಅನಿಸುತದೆ? ಅಂತ. ಅವಳು ನಾಚಿಕೆಯಲ್ಲಿ ''ಅವನಿಗೆ ನಾ ಇಷ್ಟವಾಗಿದೇನೆ, ಹಾಗೆ ನನಗೂ..!'

ಹೀಗೆ ಅವಳ ಹುಡುಗನ ಬಗೆ ನನ್ನಲ್ಲಿ ಹೇಳುತ್ತಾ ಇರುವಾಗ, ಅರೆ! ಇವನ ಹೆಸರು ಎಲ್ಲೋ ಕೇಳಿದ್ದೇನೆ ಅಲ್ವ ಅಂತ ಅನಿಸಿತು. ಮತ್ತೆ ನೆನಪಿಸುವಾಗ ನನ್ನ M.Sc ಗೆಳೆಯರ ಸಹಪಾಠಿಯಾಗಿದ್ದ , ಮಾತ್ರವಲ್ಲ ಪರಿಚಯವಿರುವ ವ್ಯಕ್ತಿಯಾಗಿದ್ದ ! ಒಟ್ಟಿನಲ್ಲಿ ಅವರಿಬ್ಬರೂ ಪರಸ್ಪರ ಹೇಳಿ ಮಾಡಿಸಿದ ಜೋಡಿಯ ಹಾಗೆ ಇದ್ದಾರೆ .

ಅವರ ಮುಂದಿನ ಬಾಳು ಇನ್ನಷ್ಟು ಸುಖಕರವಾಗಿರಲೆಂದು ಹಾರೈಸುತ್ತಾ...

Tuesday, 17 January 2012

ಇದು ಹುಚ್ಹು ಕೋಡಿ ಮನಸು...


ಆಗ ನಾನು ಪಿ ಯು ಕ್ಲಾಸಲ್ಲಿದ್ದೆ..! ಹೃತಿಕ್ ರೋಶನ್ ಫಿಲಂ ಇಂಡಸ್ಟ್ರಿ ಗೆ ಎಂಟ್ರಿ ಕೊಟ್ಟ ಸಮಯ.. ಪಿ ಯು ಕ್ಲಾಸಿನ ಮೂರು ಜನ ಹುಡುಗರು "ಕಹೋ ನ ಪ್ಯಾರ್ ಹೈ ಫಿಲ್ಮ್" ನ songs fusion ಮಾಡಿ, ಅದಕ್ಕೆ ಡಾನ್ಸ್ ಮಾಡಿ, ಎಲ್ಲರ ಮನ ಗೆದ್ದಿದರು.. ಅದೆಷ್ಟು ಫೇಮಸ್ಸಾಯಿತೆಂದರೆ, ಅದರಲ್ಲೋಬ್ಬನಿಗೆ ಹೃತಿಕ್ ಎಂದು ಅಡ್ಡ ಹೆಸರು ಬಿತ್ತು.. ಅವನು ಹಾಗೇ, ಎಲ್ಲರ ನಾಡಿಮಿಡಿತ ಅರಿತವರಂತೆ ಮತ್ತೆ ಹೃತಿಕ್ ನದೇ ಹಾಡಿಗೆ ಡಾನ್ಸ್ ಮಾಡುತಿದ್ದ.. ಏಕೆಂದರೆ ಆಗ ಹೃತಿಕ್ ಎಷ್ಟೋ ಹುಡುಗಿಯರ ಮನ ಕದ್ದು 'ಚಿತ್ತ ಚೋರ' ನಾಗಿದ್ದ. ಹಾಗೆಯೇ ಇವನ ಅಭಿಮಾನಿಗಳಲ್ಲಿ ಹುಡುಗಿಯರ ಸಂಖ್ಯೆಯೇ ಜಾಸ್ತಿ ಇತ್ತು.. ಕೆಲವು ಹುಡುಗರಿಗೆ ಹೃತಿಕ್ ನಂತೆ ಇವನಲ್ಲೂ ಸ್ವಲ್ಪ 'ಈರ್ಷ್ಯೇ' ಇತ್ತು. ಏಕೆಂದರೆ ಅವರ 'ಹುಡುಗಿ' ಯಾರು ಯಾವಾಗಲು ಹೃತಿಕ್ ನನ್ನು ಮಾತ್ರವಲ್ಲ ಇವನನ್ನೂ ಸ್ವಲ್ಪ ಜಾಸ್ತಿಯೇ ಹೊಗಳುತಿದ್ದರು..!

ಮತ್ತೆ ಡಿಗ್ರೀ ಯಲ್ಲಿರುವಾಗಲೂ ಅದೇ ಕಥೆ.. ಯಾವ ಹುಡುಗಿಯೇ ಇರಲಿ ಅವಳ ಬಾಯಲ್ಲಿ ದಿನಕ್ಕೆರಡು ಬಾರಿಯಾದರೂ ಇವನ ಹೆಸರು ಹೇಳದಿದ್ದರೆ ನಿದ್ದೆ ಬರುತಿರಲಿಲ್ಲವೇನೋ..? ಹೃತಿಕ್ ನ ಹೆಸರು ಹೇಳುವಾಗ ಅವನ ಹೆಸರು ಮತ್ತು ಅವನ ಹೆಸರು ಹೇಳುವಾಗ ಹೃತಿಕ್ ನ ಹೆಸರು, ಹೀಗೆ ಕಲಸುಮೆಲೋರಗವಾಗಿ ಬರುತಿತ್ತು.ಒಟ್ಟಿನಲ್ಲಿ ಕ್ಯಾಂಪಸ್ ಇಡಿ ಅವನದೇ ಧ್ಯಾನ!


ಆದರೆ ಯಾವಾಗ ಹೃತಿಕ್ ನನ್ನು suzana ಮದುವೆಯಾದಳೋ, ಆಗ ಅದೆಷ್ಟೋ ಹುಡುಗಿಯರು ಮನ ನೊಂದು ಸುಝಾನನ್ನು ಶಪಿಸಿ ಕಣ್ಣೀರಿಟ್ಟಿದ್ದಾರೋ, ಅದೇ ತರದ ಘಟನೆ ಇಲ್ಲಿಯೂ ನಡೆಯಿತು.ಅವ ಫೈನಲ್ ಇಯರ್ ಅಲ್ಲಿ ಇದ್ದ. ಆಗ ತಾನೇ ಫಸ್ಟ್ ಇಯರ್ ಗೆ ಸೇರಿದ ಹುಡುಗಿ ಅವನಿಗೆ clean ಬೌಲ್ಡ. ಹೀಗೆ ಅವ ಲೈಬ್ರರಿ ಯಲ್ಲಿದ್ದರೆ,ಅವಳು ಅಲ್ಲಿಯೇ ಇರುತಿದ್ದಳು. ಮೊದಮೊದಲು ಕಣ್ಣಿನಲ್ಲೇ ಮಾತಾಡ್ತಾ ಇದ್ದ ಇವರು, ಬರುಬರುತ್ತಾ ಸ್ವಲ್ಪ ದೈರ್ಯ ತಂದುಕೊಂಡು ಮಾತಾಡಲು ಪ್ರಾರಂಭಿಸಿದರು. ಅವನ ಪ್ರಕಾರ ಅವಳು, ಅವಳ ಪ್ರಕಾರ ಅವ propose ಮಾಡಿದ್ದಂತೆ. ಅದು ಯಾರೇ ಆದರೂ ಹುಡುಗಿಯರ ಮನ ನೊಂದದ್ದಂತು ಹೌದು.. ಅಬ್ಬಬ್ಬ ಅದುವರೆಗೂ ಹೊಗಳ್ತಾ ಇದ್ದ ನಾರಿಮಣಿಗಳಿಗೆ ಸಂಕಟ. ಅವಳ ಮೇಲೆ ಸಿಟ್ಟೇ ಸಿಟ್ಟು. ದಿನಾ ಅವಳನ್ನು ದೂರುವುದೇ ಕೆಲಸ. 'ಹೋಗ್ಲಿ, ಅವಳಾದರು ಮಿಟುಕಲಾಡಿ, ಛೆ ಇವನಿಗೆ ಅರ್ಥವಾಗುವುದು ಬೇಡವಾ? ಅವನ ಹೆಸರು ಅವನಾಗಿಯೇ ಕೆಡಿಸ್ಕೊಳ್ತಾನಲ್ಲ' ಅಂತ ಉವಾಚ ಬೇರೆ.. ಒಟ್ಟಿನಲ್ಲಿ ಕಾಲೇಜಿನ ಹೆಚ್ಹಿನ ಹುಡುಗಿಯರಿಗೆ ಅವನ ಮೇಲೆ ಇದ್ದ ಇಷ್ಟ ಸಿಟ್ಟಾಗಿ ಬದಲಾಗಿತ್ತು.

ಅದರ ನಂತರ, ಕ್ಯಾಂಪಸಲ್ಲಿ, ಹಾಸ್ಟೆಲಲ್ಲಿ ಅವರಿಬ್ಬರ ಬಗೆಯೇ ಚರ್ಚೆ.. ಹೀಗೆ ಹುಡುಗಿಯರ ಪ್ರೀತಿ ಪಾತ್ರನಾದ ಹುಡುಗನೊಬ್ಬ ಅವರ ಸಿಟ್ಟಿಗೆ,ಬೇಸರಕ್ಕೆ ವಸ್ತುವಾದ ವಿಷಯವನ್ನು ನೆನಪಿಸುವಾಗ ಈ ಮನಸು ಅನ್ನುವುದು ಎಷ್ಟು ವಿಚಿತ್ರ ಅಂತ ಅನ್ನಿಸುತ್ತದೆ ಅಲ್ಲವೇ..?

Tuesday, 10 January 2012

ಊರೂರು ಸುತ್ತಿದ ಮೇಲೂ, ನಮ್ಮೂರೇ ನಮಗೆ ಮೇಲು!

ನಾವೆಲ್ಲಾದರು ಹೊರದೇಶಕ್ಕೆ ಹೋದರೆ, ಅಲ್ಲೊಬ್ಬ ಭಾರತೀಯ ಸಿಕ್ಕಿದರೆ ಅಬ್ಬ ಎಷ್ಟು ಖುಷಿಯಾಗ ಬಹುದು.. ಮತ್ತೆ ಅವ ಕರ್ನಾಟಕದವನಾದರೆ ನಮ್ಮ ರಾಜ್ಯದವನೆಂಬ ಆತ್ಮೀಯತೆ ಬರುತ್ತದೆ.. ಮತ್ತೆ ನಮ್ಮೂರಿನವನೇ ಸಿಕ್ಕಿದರೆ ಅಬ್ಬ ಖುಷಿಗೆ ಪಾರವೇ ಇರುವುದಿಲ್ಲ.. ಅಂತಹ ಬಂಧ ಬೆಸೆದಿರುತ್ತದೆ ನಮ್ಮೂರು!

ಎಲ್ಲರ ಹಾಗೆ ನನ್ನ ಊರಿನ ಬಗೆ ನನಗೆ ಪ್ರೀತಿ ಇದೆ,ಹೆಮ್ಮೆ ಇದೆ, ಭ್ರಮೆ ಇದೆ, ಇವೆಲ್ಲಕಿಂತ ಹೆಚ್ಹಾಗಿ ನೆಮ್ಮದಿ ಇದೆ. ನನ್ನೂರು ಅಂದ ಮೇಲೆ ಸದಾ ಎಚರದಲ್ಲಿದ್ದು, ಆರ್ಭಟಿಸುವ ಕಡಲು.. ಮತ್ತೆ ಕಡಲ ಕಡೆ ಹರಿಯುವ ಕೆಲವಾರು ನದಿ. ನದಿಯ ಎರಡೂ ಬದಿ ಹಸಿರು ಬಣ್ಣದಿಂದ ಆವೃತವಾಗಿರುವ ಬೆಟ್ಟ ಗುಡ್ಡಗಳು.

ನನ್ನೂರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಥವಾ sweet n smart ಆಗಿ ಮಂಗಳೂರು.. ಇದೊಂದು ಪುಟ್ಟ ಭಾರತ! ಇಲ್ಲಿ ತುಳು, ಕೊಂಕಣಿ, ಬ್ಯಾರಿ, ದಕ್ಕನಿ, ಹೀಗೆ ಹಲವಾರು ಭಾಷೆ, , ವಿವಿಧ ಸಂಸ್ಕೃತಿ,ಬೇರೆ ಬೇರೆ ಧರ್ಮದ ಜನ. ಹಾಂ! ಸಂಸ್ಕೃತಿ ಅನ್ನುವಾಗ ನೆನಪಾಗುವುದು ಮದುವೆ.. ಅಬ್ಬ ಎಷ್ಟೊಂದು ವಿಭಿನ್ನ ರೀತಿ..!

ಅದನ್ನು ವಿವರಿಸಬೇಕಾದರೆ ಒಂದಿಡೀ ಬ್ಲಾಗ್ ಸಾಕಾಗಲಿಕ್ಕಿಲ್ಲವೇನೋ?

ಮತ್ತೆ ಮಂಗಳೂರು ಅನ್ನುವಾಗ ಕಲರ್- ಫುಲ್!! ಬಸ್ಸುಗಳು.. ಒಂದರ ಹಿಂದೆ ಮತ್ತೊಂದು.. ವೇಗದಲ್ಲಿ ಒಂದನ್ನು ಮತ್ತೊಂದು ಬಿಡಲಾರದು.

ಮತ್ತೆ ಮಂಗಳೂರು ಅಂದ ಮೇಲೆ ಮೀನು ಇರಲೇಬೇಕಲ್ಲವೇ..! ಅದೇ ಇಲ್ಲಿಯ ವಿಶೇಷ ಸಹ.. ಮೀನು ಇಷ್ಟಪಡ ಯಾವೊಬ್ಬ ಮಂಗಳೂರಿಗನೂ ಬಹುಶ (non vegterian)ಇರಲಾರನು ಅಂತ ಅನ್ನಿಸುತ್ತದೆ..

ಇನ್ನು ಮೀನು ಸಾಂಬಾರಿಗೆ, ಬಿಸಿ ಬಿಸಿ ನಿರ್ದೋಸೆ ಸಿಕ್ಕಿದರೆ ಕೇಳುವುದೇ ಬೇಡ!!

ಈ ಮೀನು ಎಷ್ಟು ಫೇಮಸ್ಸು ಅಂದ್ರೆ.. ಬೆಂಗಳೂರಲ್ಲಿ ನನ್ನ ಬ್ರಾಹ್ಮಿನ್ ಗೆಳೆಯರೊಬ್ಬರು ಇದ್ದಾಗ, ಗೆಳೆಯನೊಬ್ಬ ಸದಾ ಹೇಳುತಿದ್ದಂತೆ.. ''ನೀವು ಮಂಗಳೂರಿಗರು, ಮೀನು ತಿನ್ನುವವರು, ಅದರಿಂದ ಬಹಳ ಬುದ್ಧಿವಂತರು'' ಅಂತ.. ಇವರು ನಾನು veg, ಮೀನು ತಿನ್ನಲ್ಲ ಅಂತ ಎಷ್ಟೇ ಹೇಳಿದರು ಕೇಳ್ತಾ ಇರಲಿಲ್ವಂತೆ. 'ಮೀನು' ಅಷ್ಟಕ್ಕೂ ಕರಾವಳಿಯನ್ನು ಪ್ರಭಾವಿಸಿದೆ.

ಇನ್ನೊಂದು ಮಂಗಳೂರಿನ ವಿಶೇಷ ಅಂದ್ರೆ ಇಲ್ಲಿ ಎಷ್ಟು ಭಾಷೆಯಿದೆಯೋ ಅಷ್ಟು ಹೆಸರು ಈ ಊರಿಗಿದೆ.. ಮಂಗಳೂರು ಇಂಗ್ಲಿಷ್ ನಲ್ಲಿ mangalore ಆದರೆ ತುಳುವಿನಲ್ಲಿ ಕುಡ್ಲ, ಮತ್ತೆ ಕೊಂಕಣಿಯಲ್ಲಿ ಕೊಡಿಯಾಲ, ಇನ್ನು ಬ್ಯಾರಿಯಲ್ಲಿ ಮೈಕಾಲ. ಹೀಗೆ ಸಾಗುತ್ತದೆ.. ಇನ್ನು ಮಲಯಾಳಿಗಳ ಬಾಯಲ್ಲಿ ಮಂಗಲಾಪುರಂ..!

ಹಲವಾರು ಶಿಕ್ಷಣ ಸಂಸ್ಥೆಯಿರುವ ನನ್ನೂರು ಬುದ್ದಿವಂತರ ಜಿಲ್ಲೆ ಅಂತ ಫೇಮಸ್ಸು. ಆದರೆ ಕೆಲವಾರು ರಾಜಕೀಯದವರ ಅಧಿಕಾರದ ಹಪಹಪಿಕೆಗೆ ಬಲಿಯಾಗುವುದು ಮಾತ್ರ ದುರಂತ..! ಬೇರೆ ರಾಜ್ಯದ ಪೋರ್ಟ್ ಸಿಟಿ ಗೆ ಹೋಲಿಸಿದರೆ, ನನ್ನೂರು ಬೆಳೆದೇ ಇಲ್ಲ ಅಂತ ಅನಿಸುತ್ತದೆ!

ಆದರೆ

ರಾಜಕಿಯದವರೇನು ತಿಪ್ಪರಲಾಗ ಹಾಕಿದರೂ ನನ್ನೂರಿನ ಬಾಂಧವ್ಯಕ್ಕೇನು ಕೊರತೆಯಾಗಿಲ್ಲ. ಇಲ್ಲಿಯ ಜನ ಧರ್ಮ,ಭಾಷೆ ಮರೆತು ಮಾಡುವ ಸೇವೆ-ಸಹಾಯ ಬಹುಶ ಬೇರೆ ಊರಿಗೆ ಹೋಲಿಸಿದರೆ ಸ್ವಲ್ಪ ಜಾಸ್ತಿಯೇ ಅಂತ ಅನ್ನಿಸುತ್ತದೆ.. ಅದು ಅಕ್ಸಿಡೆಂಟ ಟೈಮಲ್ಲಿ ಇರಬಹುದು ಅಥವಾ ಬೇರೆ ಯಾವುದೇ ಸಂದರ್ಭ ಇರಬಹುದು..

ಹೀಗೆ ನನ್ನೂರನ್ನು ಬಿಟ್ಟು ದೂರ ಹೋದಾಗಲೆಲ್ಲ ತೀವ್ರವಾಗಿ ಕಾಡುವ ಊರು ನಾನು ಪ್ರೀತಿಸುವ ನನ್ನ ತವರೂರು..!