Monday, 24 October 2011

ನೊಬೆಲ್ ಸಿಗದೇ ಇರುತ್ತಿದ್ದರೆ..?!

ಸೆಪ್ಟೆಂಬರ್ 30 ರಂದು ಜೀವ ವಿಜ್ಞಾನಿ 'ಸ್ಟೈನಮನ' ಇಹಲೋಕ ತ್ಯಜಿಸಿದ... ಅದು ಹೊರ ಜಗತ್ತಿಗೆ ಮಾತ್ರವಲ್ಲ ನೊಬೆಲ್ ಕಮಿಟಿಯವರಿಗೆ ಗೊತ್ತಾಗಿರಲಿಲ್ಲ! ನೊಬೆಲ್ ಕಮಿಟಿಯವರು ಫೋನ್ ಮೂಲಕ 'ಸ್ಟೈನಮನ' ಗೆ ಪ್ರಶಸ್ತಿ ಸಿಕ್ಕಿದ ವಿಷಯ ತಿಳಿಸಿದಾಗ ಮನೆಯವರ ಸ್ಥಿತಿ ಸಂದಿಗ್ದ.! ಅವರಿನ್ನು ಸ್ಟೈನಮನ ಸಾವಿನ ಆಘಾತದಿಂದ ಹೊರಬಂದಿರಲಿಲ್ಲ..

ಮಾನವನ ರೋಗಕ್ಕೆ ಮತ್ತು ಅದರ ಚಿಕಿತ್ಸೆಗೆ ರಕ್ತವೇ ಕಾರಣ ಅಂತ ನಂಬಿದ್ದ ವಿಜ್ಞಾನ ನಂಬಿಕೆಗೆ ವಿರುದ್ದವೆಂಬಂತೆ ಹೊಸಲೋಕವನ್ನು ತೆರೆದಿಟ್ಟ ಬ್ರಾಂಚ್ immunology. ವಿಭಾಗದಲ್ಲಿ ಅಪೂರ್ವ ಸಾಧನೆ ಮಾಡಿದ ಮೂವರಿಗೆ ವರ್ಷದ ನೊಬೆಲ್ ಸಿಕ್ಕಿದೆ.. ಸ್ಟೈನಮನ adoptive immune system ನಲ್ಲಿ ಅತಿ ಅವಶ್ಯಕ ವಾಹಕವಾದ dendritic cells ಅನ್ನು ಮತ್ತು ಅದರ ಕಾರ್ಯಕ್ಷೇತ್ರದ ಬಗೆ ಸಂಶೋಧಿಸಿದರೆ, ಹಾಫ್ಫ್ಮನ್ ಮತ್ತು ಬಟ್ಲರ್ innate immune system ಮತ್ತು receptor protien ಬಗ್ಗೆ ಮಾಡಿದ ಸಂಶೋಧನೆಗೆ. ಒಟ್ಟಿನಲ್ಲಿ ಮೂವರ ಸಂಶೋಧನೆ ವಿಜ್ಞಾನ ಲೋಕದಲ್ಲಿ ಮಾತ್ರವಲ್ಲ ವೈದ್ಯ ಲೋಕದಲ್ಲಿ ಹೊಸ ಆಲೋಚನೆಯನ್ನು ತೆರೆದಿಟ್ಟದ್ದಲ್ಲದೆ, immunotherapy ಯಂತಹ advanced ಚಿಕತ್ಸ ಕ್ರಮದ ಕಡೆಗೆ ನೋಟವನ್ನು ಹೊರಳುವಂತೆ ಮಾಡಿದೆ.. ಅಲ್ಲಿಂದೀಚೆಗೆ ಹಲವಾರು ಸಂಶೋಧನೆಗಳು ಕ್ಷೇತ್ರದಲ್ಲಿ ಸಾಗುತ್ತಲೇ ಬಂದಿದೆ ಮತ್ತು ಹೊಸ ಪಲಿತಾಂಶಗಳು ಸಿಕ್ಕಿವೆ.

ಈ ಕ್ಷೇತ್ರ ಅಮೂರ್ತವಾಗಿದ್ದ ಕಾಲದಲ್ಲಿ ಈ ವಿಜ್ಞಾನಿ ಗಳು ಬೇರೆ ಬೇರೆಯಾಗಿ ಸಂಶೋಧನೆಯಲ್ಲಿ ನಿರತರಾಗಿದ್ದಲ್ಲದೆ ಸಫಲರಾದರು.. ಆದರೂ ಅವರು ತಮ್ಮ ಸಂಶೋಧನೆಯಿಂದ ವಿರಮಿಸಿರಲಿಲ್ಲ.. ಸ್ಟೈನಮನ ಸ್ವತ ಕ್ಯಾನ್ಸರ್ ರೋಗದಿಂದ ಬಳಲುತಿದ್ದರು, ತನ್ನ ದೇಹವನ್ನೇ ತಾನು ಸಂಶೋಧಿಸಿದ ಸಂಶೋದನೆಗಳಿಗೆ ಒಡ್ಡಿದ.. ಅಷ್ಟು ತಾದತ್ಮತೆ.. pancreatic ಕ್ಯಾನ್ಸರ್ ನಿಂದಾಗಿ ಡಾಕ್ಟರ್ ಕೆಲವು ತಿಂಗಳು ಬದುಕಬಹುದೆಂದು ಹೇಳಿದರು, ಅವ ತನ್ನದೇ ಆದ immunotherapy ಮಾದರಿ ಚಿಕಿತ್ಸೆಯನ್ನು ಪಡೆದು ನಾಲ್ಕು ವರ್ಷ ಬದುಕಿದ್ದಲ್ಲದೆ 'ಇಮ್ಮುನೋ ಥೆರಪಿ' ಯ ಬಗೆ ಭರವಸೆಯನ್ನು ಹೆಚ್ಹಿಸಿದ.
ಆದರೆ ಇಷ್ಟೆಲ್ಲಾ ಸಾಧನೆ ಮಾಡಿದ ಸ್ಟೈನಮನ ಮರಣಿಸಿದ್ದು ಹೊರ ಜಗತ್ತಿಗೆ ಗೊತ್ತಾಗಲೇ ಇಲ್ಲ.. ಅಷ್ಟಕ್ಕೂ ಜೀವ ವಿಜ್ಞಾನ ಅನ್ನುವುದು ಬೇರೆ ವಿಜ್ಞಾನದಷ್ಟು ಮಹತ್ವ ಅಲ್ಲ ಅಂತ ಜನ ಮತ್ತು ಮಾಧ್ಯಮ ಭಾವಿಸಿದ್ದಾರೋ ಏನೋ?! ಆದರೆ ಸ್ಟೈನಮನ ನೊಬೆಲ್ ಗಾಚೆಗೆ ಚರ್ಚಿಸಲ್ಪಟ್ಟ.. ಯಾಕೆಂದರೆ ಅವನ ನಿಧನದ ನಂತರ ನೊಬೆಲ್ ಘೋಷಣೆಯಾದದ್ದು ನೊಬೆಲ್ ಇತಿಹಾಸದಲ್ಲಿ 3 ನೇ ಘಟನೆ ಯಾಗಿದ್ದಲ್ಲದೆ ಚರ್ಚೆಗೂ ಒಳಪಟ್ಟಿತು . ಸಾಮಾನ್ಯವಾಗಿ ನೊಬೆಲ್ ಮರಣೋತ್ತರವಾಗಿ ಕೊಡಲ್ಪಡುವುದಿಲ್ಲ.

ಒಟ್ಟಿನಲ್ಲಿ ಅವನ ಸಾದನೆ ವೈದ್ಯಲೋಕದಲ್ಲಿ ಅಪೂರ್ವಾದದ್ದು. ಅದೊಂದು ಉತ್ತಮ ಭರವಸೆಯ ಕ್ಷೇತ್ರ. ಕ್ಯಾನ್ಸರ ನಂತಹ ಭೀಕರ ಕಾಯಿಲೆಗೆ immunotherapy ಯಿಂದ ಪರಿಹಾರ ಸಾಧ್ಯ ಎಂದು ತೋರಿಸಿ ಅವನು ಲೋಕದಿಂದ ನಿರ್ಗಮಿಸಿದ.. ಸ್ಟೈನಮನ ಗೆ ನೊಬೆಲ್ ಸಿಗಬಹುದೆಂದು ಅವನ ಮಗಳು ಕನಸು ಕಂಡಿದ್ದಳು. ಆದರೆ ಅದು ಘೋಷನೆಯಾಗುವ ಮುನ್ನವೇ ಹೊರಟು ಬಿಟ್ಟಿದ್ದ.. ಒಂದು ವೇಳೆ ಅವನಿಗೆ ನೊಬೆಲ್ ಸಿಗದಿರುತಿದ್ದರೆ ಸ್ಟೈನಮನ ಕೇವಲ್ ಜೀವ-ವಿಜ್ಞಾನ ವಿಧ್ಯಾರ್ಥಿಗಳಿಗೆ ಮಾತ್ರ ಗೊತ್ತಾಗಿ ಮಿಕ್ಕವರಿಗೆ ಅಜ್ಞಾತನಾಗಿಯೇ ಇರುತಿದ್ದನೋ ಏನೋ?! ವಿಧಿವಿಚಿತ್ರವೆಂಬಂತೆ ನೊಬೆಲ್ ತನ್ನ ಘನತೆಯನ್ನು ಎತ್ತಿ ಹಿಡಿಯಿತು..!

Monday, 17 October 2011

ಕನಸಲ್ಲೂ ಬರದ, ಕವನವೂ ಆಗದ ಹುಡುಗಿ...

ಬೆಳಿಗ್ಗೆ ನಾನು ಮತ್ತು ಗೆಳೆಯ ಕಾಲೇಜಿನ ವಿಜ್ಞಾನ ಭವನದ 1st floor ನಲ್ಲಿ ನಿಂತು ಮಾತಾಡುತ್ತಿದ್ದೆವು.. ಆಗ ಪಿಂಕ್ ಸಲ್ವಾರ್ ಹಾಕಿದ ಹುಡುಗಿ ತನ್ನ ಗೆಳೆತಿಯರೊಡನೆ ಬರುತಿದ್ದಳು.. ಗೆಳೆಯ ಅವಳನ್ನು ತೋರಿಸಿ '' ನೋಡು ಆ ಹುಡುಗಿ ದಿನಾಲು ನಿನ್ನನೆ ನೋಡುತಿರುತ್ತಾಳೆ.. ನಂಗೆ ಗೊತಿಲ್ಲದೆ ನಿಮ್ಮ ಕಣ್ಣಲ್ಲಿ ಏನೋ something something...'' ಹೇಳಿ ಮುಗಿಸುವ ಮೊದಲೇ ವಕ್ಕರಿಸಿದ ನಮ್ ಕ್ಲಾಸಿನ ನಾರಿಮಣಿಗಳು ಸಿಕ್ಕಿದ ಚಾನ್ಸ ಅಂತ ಛೇಡಿಸಿದ್ದೇ ಛೇಡಿಸಿದ್ದು.. ಒಟ್ಟಿನಲ್ಲಿ ನನ್ನ ಅರಿವಿಗೆ ಬಾರದ ಒಂದು ವಿಷಯ ನನಗಿಂತ ಮೊದಲೇ ಗೆಳೆತಿಯರಿಗೆ ಗೊತ್ತಾಗಿತ್ತು...ಅಂದ ಹಾಗೆ ಆ ಹುಡುಗಿ ಮಲೆನಾಡಿನ, western ghat ತಪ್ಪಲಿನ ಕುದುರೆಮುಖಕ್ಕೆ ಹತ್ತಿರದವಳು.. ಆಗಸ್ಟೇ pu ಗೆ ನಮ್ ಕಾಲೇಜಿಗೆ ಸೇರಿದ್ದಳು..ಸದಾ ಹಸನ್ಮುಖಿಯಾಗಿ ಗೆಳತಿಯರೊಡಗೂಡಿ ಬರುತಿದ್ದಳು...ನಾನು ಕಾಲೇಜಿನಲ್ಲಿ ಸ್ವಲ್ಪ ಮಟ್ಟಿಗೆ ಜನಪ್ರಿಯನಾಗಿದ್ದೆ.. Student association seceretary, ಕವನ ಇವೆಲ್ಲವೂ ಸ್ವಲ್ಪ ನನ್ನ ವರ್ಚಸ್ಸನ್ನು ಹೆಚ್ಚಿಸಿತ್ತು...!

ಸೈನ್ಸ್ ಬ್ಲಾಕ್ ಒಂಥರ ನಮ್ಮ ಕಾಲೇಜಿನಲ್ಲಿ ಬಾಲ್ಕನಿ ಇದ್ದ ಹಾಗೆ.. ಕಾಂಪಸ ದರುಶನ ಪೂರ್ಣವಾಗಿ ಅಲ್ಲಿಗೆ ಆಗುತಿತ್ತು.. ಅದು ಬೇರೆ pu ಕಾಲೇಜಿಗೆ ಹತ್ತಿರದಲ್ಲೇ ಇತ್ತು.. ಹಕ್ಕಿಗಳು ಎಲೆಕ್ಟ್ರಿಕ್ ವಯರಿನ ಮೇಲೆ ಸಾಲಾಗಿ ಕೂತ ಹಾಗೆ ನಾವು 'ಗ್ಯಾಲರಿ'ಲ್ಲಿ ನಿಂತು comment ಹೊಡೆಯುವುದು.. ಕಾಲೆಳೆಯುವುದು ಮುಂತಾದ ಘನ ಕಾರ್ಯ ಮಾಡುತಿದ್ದೆವು!

ವಿಶೇಷವೆಂದರೆ ಆ ಹುಡುಗಿಯ ಬಗೆ ನನಗಿಂತಲೂ ವಿಶೇಷ ಆಸಕ್ತಿ ನನ್ನ ಗೆಳತಿಯರಿಗೆ! ದಿನಾಲು ಅವಳ ವಿಷಯವನ್ನು update ಮಾಡುತಿದ್ದರು...! ಆ ಹುಡುಗಿ ಹಾಸ್ಟೆಲನಲ್ಲಿ ನನ್ನ ಡ್ರೆಸ್ ಸ್ಟೈಲ್ ಬಗೆ ಅವಳ ರೂಮ್ ಮೆಟ್ ಲ್ಲಿ ಮಾತಾಡಿದರೆ ಮಾರನೆ ದಿವಸ ಮದ್ಯಾಹ್ನ ದೊಳಗೆ ನನ್ನ ಕಿವಿಗೆ ಬಂದು ತಲುಪಿಸುತಿದ್ದರು... ಅಬ್ಬಬ್ಬ! ''ಚತುರ ನಾರಿಯರು!'' ಇವರಿಗೆ ಯಾವ ಮೀಡಿಯಾ ತಾನೇ ಸಾಟಿ...

ಒಂದು ಮದ್ಯಾಹ್ನ ಲೈಬ್ರರಿ ಯಲ್ಲಿ ನಾ ಕೂತಿದ್ದೆ! ಅಷ್ಟರಲ್ಲಿ 'ಅವಳು' ಬಂದಳು.. ಅಲ್ಲೇ ರೆಫೆರೆನ್ಚೆ ಸೆಕ್ಷನ ಕೂತಳು.. ಸ್ವಲ್ಪ ಹೊತ್ತಲ್ಲೇ ನನ್ನ ಗೆಳೆತಿಯರ ಸವಾರಿ ಅಲ್ಲಿಗೆ ಬಂತು.. ಕೇಳಬೇಕೆ ಇನ್ನು..!

ಮತ್ತೊಂದು ದಿವಸ ಗೆಳತಿಯೊಬ್ಬಳು ಬಂದು, "ಸಾಕಪ್ಪಾ ನಿನ್ನ ಸಹವಾಸ! ಆ ಹುಡುಗಿ ನನ್ನನ್ನು ನೋಟದಲ್ಲಿ ಭಸ್ಮಾಸುರನಂತೆ ಲುಕ್ ಕೊಟ್ಟು ಹೆದರಿಸ್ತಾಳೆ" ಅಂತ ಹೇಳಿದಳು.. ಕಾರಣ ಇಷ್ಟೇ ಈ ನನ್ನ ಗೆಳತಿ ಎಲ್ಲರಿಗಿಂತ ನನ್ನಲ್ಲಿ ಆತ್ಮಿಯವಾಗಿದ್ದದ್ದು ಮಾತ್ರವಲ್ಲ ತುಂಬಾ ಸಲುಗೆಯಿಂದ ಇರುತಿದ್ದಳು.. ಇದನ್ನು ಕಂಡ ಅವಳಿಗೆ ಈರ್ಷೆಯೋ ಏನೋ..!?

ಮತ್ತೆ ಕೆಲವು ಗೆಳತಿಯರಿಂದ ಪ್ರಪೋಸ್ ಮಾಡಲು ಒತ್ತಾಯ.. ನಾನಂತೂ ಮೌನವಾಗಿಯೇ ಇದ್ದೆ.. ಅಷ್ಟಕ್ಕೂ ಕ್ಯಾಪಾಸಿಟಿ ಬೇಡವೇ..!! ಒಬ್ಬಳಂತು ಅವಳ ಹತ್ತಿರ ಮಾತಾಡಿಸಿ ಬಂದಳು.. ಇನ್ನು ನಮ್ಮ ಆತ್ಮೀಯ ಮೇಡಂ ಒಬ್ಬರಿಗೆ ಗೊತ್ತಾಗಿ ಅವರು ಈ ಗೆಳೆತಿಯರ ಜತೆಗೂಡಬೇಕೆ..!

ಇವರೆಷ್ಟೇ ತಮಾಷೆ ಮಾಡಿದರೂ, ಛೇಡಿಸಿದರೂ, ಆ ಹುಡುಗಿ ನನ್ನ ಕವನ ಬಿಡಿ ಒಂದು ಕವನಕ್ಕೂ ಸ್ಪೂರ್ತಿಯು ಆಗಲಿಲ್ಲ..! ಮಾತ್ರವಲ್ಲ ಒಂದೆರಡು ಸಲ ಬಿಟ್ಟರೆ ಮಾತಾಡಲೇ ಇಲ್ಲ.. ಕೇವಲ ನಗುವಿಗಷ್ಟೇ ಸೀಮಿತವಾಗಿತ್ತು ನಮ್ಮ ಒಡನಾಟ.. ಆದರೆ ನನಗೆ ಕಾಡದ ಹುಡುಗಿ ನನ್ನ ಗೆಳೆತಿಯರಿಗೆ ಕಾಡುತ್ತಲೇ ಇದ್ದಳು...

ಈಗ ಅವಳು ತನ್ನ ಶಿಕ್ಷಣವನ್ನು ಮುಂದುವರೆಸುತ್ತಾ ಎಲ್ಲಿದ್ದಾಳೋ, ಅವಳಿಗೆ ನಾನೆಲ್ಲಿದ್ದೇನೆ ಅಂತ ತಿಳಿಯದು..! ಒಟ್ಟಿನಲ್ಲಿ ಅವಳ ವಯೋ ಸಹಜ ಆಕರ್ಷಣೆ, infatuation ಸ್ನೇಹಿತರ ಮದ್ಯ ನನ್ನನ್ನು ಛೇಡಿಸುವ ವಸ್ತುವಾಗಿತ್ತು... ನನ್ನ ಗೆಳೆತಿಯೊಬ್ಬಳು ಆ ಹುಡುಗಿಯೊಂದಿಗೆ ಹಾಸ್ಟೆಲನಲ್ಲಿ ಇದ್ದವಳು, ಈ ವಿಷಯವನ್ನು ಪ್ರಸ್ತಾಪಿಸದೆ ಈಗಲೂ ಮಾತು ನಿಲ್ಲಿಸುವುದಿಲ್ಲ. ಅಷ್ಟಕ್ಕೇ ಅವಳು ಪ್ರಭಾವಿಸಿದ್ದಳು..!









Monday, 10 October 2011

ಕುಡುಕರೊಂದಿಗೆ ಒಂದಷ್ಟು ಹೊತ್ತು..


ಯಾವುದೊ ಸಿನಿಮಾದಲ್ಲಿ ಕಾಮಿಡಿ actor ಕುಡುಕನ ಪಾತ್ರದಲ್ಲಿ ಆಡಿದ ಡೈಲಾಗ್ ಹೀಗಿತ್ತು ''ಗುರು, ನನ್ ಬ್ರೈನಿಗು, ಟಂಗಿಗೂ ಕನೆಕ್ಷನ್ ಕಟ್ ಆಗೈತೆ!'' ಹೌದು ಕುಡುಕರು ಕುಡಿದಾಗ ಆಡುವುದೇ ವಿಶಿಷ್ಟ! ಅದರಲ್ಲಿ ಅವರ ಮಾತುಗಳು ಯಾವುದೇ ಮಾತುಗಾರನನ್ನು ತಲೆತಗ್ಗಿಸಬೇಕು... ಅವನ ಇಂಗ್ಲಿಷೋ ಓತಪ್ರೋತ ವಾಗಿ, ಸರಾಗವಾಗಿ ಅವನ ಬಾಯಲ್ಲಿ ಹರಿಯುತ್ತೆ. ನಟನೆಯಲ್ಲಿ ಅವನನ್ನು ಮೀರಿಸುವವರು ಬಿಡಿ, ಅವನ ನಟನೆಯನ್ನೇ ಫಿಲಂ ಅಲ್ಲಿ ಅಳವಡಿಸುತ್ತಾರೆಂದರೆ!! ಇನ್ನು ಅವ ಹಾಡಿದರೆ ಯಾವ ಸಂಗೀತ ರಸ ಸಂಜೆ ಗೆ ಸಾಟಿ?!.. ಭಾವಗಳು ಅದಲುಬದಲಾಗಿ, ಪದಗಳು ಪಲ್ಲಟವಾಗಿ, ಅದೊಂಥರ mixed emotions!! ಇನ್ನು ಅವ ಡಾನ್ಸ್ ಮಾಡಿದರೆ, ಅಬ್ಬಬ್ಬ ಎಷ್ಟು ಜನಸಾಗರ ಅದನ್ನು ನೋಡಲು! ಅವನ ಸ್ಟೆಪ್ ಗೆ ಮೆಲ್ಲನೆ ಮೈ ಕುಣಿಸುವವರು ಇದ್ದಾರೆ. ಅಷ್ಟು ಖುಷಿ ಕೊಡುತ್ತದೇನೋ?!

ನಾನು ಬೆಂಗಳುರಲ್ಲಿದ್ದಾಗ ನನ್ ರೂಮ್ ಮೆಟ್ ಯಾವಾಗಲು ಫುಲ್ ಟೈಟ್..! ಅವರು ಎಷ್ಟು ಕುಡಿದರೂ ಯಾರಿಗೂ ಉಪದ್ರವ ಕೊಡುವವರಲ್ಲ.. ಏನೋ ಕುಡಿಯದೆ ಇದ್ದಾಗ ಬಹಳ ಮಾತಾಡುವ ಅವರು ಕುಡಿದರೆ ತುಟಿಪಿಟಿಕೆನ್ನದೆ ನಿರ್ಲಿಪ್ತರಾಗಿರುತ್ತಾರೆ! ಆದ್ರೆ ಒಂದು ರಾತ್ರಿ ಅವರ ಗೆಳೆಯನೊಬ್ಬ ಕುಡಿದು ನಮ್ ರೂಮಲ್ಲಿ ರಂಪಾಟವೋ ರಂಪಾಟ! ಹೋಗಿ luv failure ಕೇಸ್.. ಅವಳಿಗೆ ಬೈದದ್ದೇ ಬೈದದ್ದು! ಕೆಟ್ಟ ಕೆಟ್ಟ ಪದಗಳು.. ರಾತ್ರಿ ಇಡಿ ನನ್ನ ನಿದ್ದೆಯೆಲ್ಲ ಹಾಳು ಮಾಡಿಬಿಟ್ಟ! ಅವನ ಇಂಗ್ಲಿಷ ಮಿಶ್ರಿತ ಕನ್ನಡ ಡೈಲಾಗ್ ಗಳು ಯಾವ ನಾಟಕ ದಲ್ಲೂ ಸಿಗಲಿಕ್ಕಿಲ್ಲ.! ಇನ್ನು ಒಂದು ವಿಷಯವೆಂದರೆ ಅವ ಅಸಿಸ್ಟಂಟ್ ಪ್ರೊಫೆಸರ್ ಆಗಿ ನೇಮಕವಾಗಿದ್ದ.! ತನ್ನ ಒರಟು ತನದಿಂದ ಹುಡುಗಿಯನ್ನು ಕಳಕೊಂಡಿದ್ದ.!

UG ಯಲ್ಲಿರುವಾಗ ಗೆಳೆಯರೊಡಗೂಡಿ ಮಡಿಕೇರಿಗೆ ಹೋಗಿದ್ದೆವು.. ಮಡಿಕೇರಿ ಸುತ್ತಾಡಿ ಅಂದು ರಾತ್ರಿ ರೂಮಲ್ಲೇ ಫ್ರೆಂಡ್ಸ ಪಾರ್ಟಿ.. ಕೆಲವರು bear, ಮತ್ತೆ ಕೆಲವರು vodka, ಇನ್ನು ಕೆಲವು ನನ್ನಂತವರು ಕೂಲ್ ಡ್ರಿಂಕ್ಸ್.. ಹೀಗೆ ಎಲ್ಲರು ಜತೆಗುಡಿ ಒಂದೇ ರೂಮಲ್ಲಿ ಕುಡಿಯುತ್ತ, ಹರಟೆ ಹೊಡೆಯುತ್ತ, ಪಾರ್ಟಿ ಮುಗಿಸಿ ನಮ್ಮ ನಮ್ಮ ರೂಮ್ ಕಡೆ ಹೊರಟೆವು.. ನನ್ನ ರೂಮ್ ಮೇಟ್ ಕುಡಿದಕ್ಕಿಂತ ಜಾಸ್ತಿಯಾಗಿ ತೂರಾಡುತ್ತ ಇದ್ದ.. ಅಷ್ಟು imbalance ಆಗಿದ್ದ.. ಅಂತು ರೂಮಿಗೆ ಬಂದು ಬೆಡ್ ಮೇಲೆ ಬಿದ್ದ ಕೂಡಲೇ ಅವನ luv ಸ್ಟೋರಿ ಆರಂಬಿಸಿದ.. ಅವನ luv ಸ್ಟೋರಿ ಗಿಂತ ಅವ ಮಾತಿನ ಮದ್ಯ ಹೇಳುವ '' ಹೇಯ್ ನಾನು ಕುಡಿದು ಮಾತಾಡುವುದಲ್ಲ!'' ಎನ್ನುವುದು ನಗು ತರಿಸುತಿತ್ತು.. ಅಂದ್ರೆ ಅವನು ಹೇಳ್ತಾ ಇದ್ದದು ಇಷ್ಟೇ ನಾನು ಸತ್ಯ ಹೇಳುತಿದ್ದೇನೆ ಎಂದು!

ಇನ್ನು high society ಕುಡುಕರನ್ನು ನೋಡಲು ಸಿಟಿಯಲ್ಲಿರುವ pub ಅಥವಾ ಪಾರ್ಟಿ ಗೆ ಹೋಗಬೇಕು.! ಸಂಗೀತ ಅನ್ನುವುದು rock ಮಾತ್ರ.! ಬೆಳಕು ತಿಯೇಟರ್ ಗಿಂತ ಕಡಿಮೆಯಾಗಿರುತ್ತದೆ.. ಆಗಾಗ ನಿಯಾನ್ ಲೈಟ್ ಗಳ ಕಲರವ.. ಕುಡಿದು ಮತ್ತೇರುವಾಗ ಒಬ್ಬಬ್ಬರದ್ದೇ dance.. ಸುಸ್ತಾದಾಗ ಕುಳಿತು ಒಂದೆರಡು ಸಿಪ್.. ಮತ್ತೆ dance... ಅಲ್ಲಿಂದ ತೂರಾಡುತ್ತ ಅವರ ವೆಹಿಕಲ್ ಕಡೆ ಹೋಗ್ತಾರೆ.. ಕೆಲವರನ್ನು ವೆಹಿಕಲ್ ಗೆ ಹತ್ತಿಸುವುದೇ ಹರಸಾಹಸ..!

ಹೀಗೆ ಕುಡಿಯುವುದೆಂದರೆ ಕೆಲವರಿಗೆ enjoyment., ಮತ್ತೆ ಕೆಲವರಿಗೆ hobby, ಕೆಲವರಿಗಂತೂ ಅನಿವಾರ್ಯತೆ- ನೋವು ಮರೆಸುತ್ತಂತೆ!ಕುಡಿಯುವುದನ್ನು ಬಿಡಲು ಅವರಿಗೂ ಮನಸಿರುತ್ತಂತೆ! ರಾತ್ರಿ ಕುಡಿದು ಬಂದಾಗ ನಾಳೆ ಕುಡಿಯುವುದಿಲ್ಲವೆಂದು ಅಂದು ಕೊಳ್ಳುತ್ತಾರಂತೆ..! ಬೆಳಿಗ್ಗೆಯಾದಾಗ ಏನೋ guilty.! ಎಲ್ಲರಿಗೂ ಉಪದ್ರ ಕೊಟ್ಟೆ ಅಂತ ಬೇಜಾರಾಗಿ ತಲೆನೋವು ಪ್ರಾರಂಬಿಸುತ್ತದೆ.. ತಲೆನೋವನ್ನು ಮರೆಸಲು ಪುನ ಕುಡಿಯುತ್ತಾ ಬೇರೆಯವರಿಗೆ ತಲೆನೋವಾಗಿ ಪರಿಣಮಿಸುತ್ತಾರೆ..!

Monday, 3 October 2011

ಪೆನ್ನಿನ ಲೋಕದಲ್ಲಿ...
ಮೊನ್ನೆ ಶಾಪಿಂಗ್ ಮಾಲ್ ನಲ್ಲಿ ಹೋಗುತ್ತಿರಬೇಕಾದರೆ ಗೆಳೆಯನೊಬ್ಬ ಪೆನ್ನಿನ ಶಾಪ್ ನೋಡಿ ಹೇಳಿದ ''ಈ ಕಂಪ್ಯೂಟರ್ ಯುಗದಲ್ಲಿ ಬರಿ ಪೆನ್ನು ಮಾರಿ ಇಲ್ಲಿಯ rent ಕೊಡುವುದ ಹೌದ? ಅದು ಒಂದೇ ಕಂಪೆನಿಯದ್ದು!' ಅಂತ..

ಆಗ ಅವನ ಮಾತು ನನ್ನನು ಬಾಲ್ಯ ಕಾಲಕ್ಕೆ ಅಂದ್ರೆ ಪೆನ್ನಿಗಿಂತ ಮೊದಲ ಯುಗಕ್ಕೆ ಕೊಂಡೊಯ್ಯಿತು. ಪೆನ್ಸಿಲಲ್ಲಿ ಬರೆಯುವ ಟೈಮ್.. ''Unheard melodies sweeter dan heard melodies'' ಎನ್ನುವ ಕವಿವಾಣಿಯಂತೆ ಆಗೆಲ್ಲ ನಮಗೆ ಪೆನ್ನಲ್ಲಿ ಬರೆಯುವ ತವಕ... ಅಂತೋ ದೊಡ್ಡ ತರಗತಿಗೆ ಬಂದಾಗ ಪೆನ್ನಲ್ಲಿ ಬರೆಯುವ ಅವಕಾಶ ಸಿಕ್ಕಿದರೂ, ಇಂಗ್ಲಿಷ್ ಮತ್ತು ಹಿಂದಿ ಟೀಚರ್ ನವರಿಗೆ ಬಾಲ್ ಪೆನ್ನಲ್ಲಿ ಬರೆಯಲೇಬಾರದು. ಬರೆದರೆ ಅದೇನೋ ಮಹಾ ಅಪರಾಧ ಮಾಡಿದ ಹಾಗೆ.! ಪುಣ್ಯಕ್ಕೆ ಉಳಿದ ಟೀಚರ್ ನವರು ನಾವು ಇಷ್ಟಪಟ್ಟ ಪೆನ್ನಲ್ಲಿ ಬರೆಯುವ ಸ್ವಾತಂತ್ರ್ಯ ಕೊಟ್ಟಿದ್ದರು.. ಹಾಗೆ ನಮ್ಮ ಬಾಲ್ಯಕಾಲ ಕಳೆದದ್ದು ಎರಡು ಪೆನ್ನಿನೊಟ್ಟಿಗೆ! ಹೆಣ್ಣಿನೊಟ್ಟಿಗೆ ಅಲ್ಲ...!

Ink ಪೆನ್ ಒಂಥರಾ ಮಜಾ.. ಅದರಲ್ಲಿ ಬರೆಯುವುದೆಂದರೆ ತುಂಬಾ ನಾಜುಕಾಗಿರಬೇಕು! ಸ್ವಲ್ಪ ಒತ್ತಿ ಬರೆದರೆ, ಪೇಪರ್ ಹರಿಯುತ್ತೆ..! So ಯಾವಾಗಲು ಒಂದು ಹದವಾಗಿ (balance) ಬರೆಯುತಿರಬೇಕು. ನಡುವೆ ಕೈ ಕೊಟ್ಟರೆ ರಪ್ಪನೆ ಕೈ ಕೊಡವೆಬೇಕು.. ಒಮ್ಮೊಮ್ಮೆ ಹಾಗೆ ಕೊಡವಿಕೊಳ್ಳುವಾಗ ಎದುರಿನವರ ಶರ್ಟಿನಲ್ಲಿ ಇಂಕಿನ ಚಿತ್ತಾರ moodutiruttade.. ಕ್ಲಾಸ್ ಆದ ಕೂಡಲೇ ಜಗಳವೋ ಜಗಳ..! ಪುಣ್ಯಕ್ಕೆ ನಮ್ಮ ಶರ್ಟ್ ಯಾವಾಗಲು ಸೇಫ್.. ಯಾಕೆಂದರೆ ನಾವು ಯಾವಾಗಲು ಲಾಸ್ಟ್ ಬೆಂಚ್!

ಮತ್ತೊಂದು Ink ಪೆನ್ನಿನ ಹೊಟ್ಟೆ ತುಂಬಿಸಲು ನಮ್ಮಲ್ಲಿ ಸದಾ Ink bottle ಇರಲೇಬೇಕು.. ನಮ್ Ink bottle ಯಾವಾಗಲು ಖಾಲಿಯಾಗುತ್ತ ಇರಲಿಲ್ಲ.. ನನ್ನ ಗೆಳೆಯರು ಬೇರೆಯವರ bottle ನಿಂದ ತುಂಬಿಸಿಕೊಡುತಿದ್ದರು..! Ink ಪೆನ್ನಿನ ಪ್ರಾಬ್ಲಮ್ ಅಂದ್ರೆ ಕೈಯಲ್ಲಿ ಸದಾ Ink ಆಗುವುದು.. ಆದರೆ ನಂದು ಹೀರೋ ಪೆನ್ ಆಗಿದ್ದರಿಂದ ಸಮಸ್ಯೆ ಇರುತಿರಲಿಲ್ಲ.. ನಂ ಪೆನ್ ನೋಡಲು ತುಂಬಾ ಚಂದ ಇದ್ದರಿಂದ ಎಲ್ಲರಿಗು ಆದರೆ ಮೇಲೆ ಕಣ್ಣು.. ಅದು ನನಗೆ ತಂದೆ ಗಲ್ಫ್ ನಿಂದ ತಂದ ಪೆನ್ನಾಗಿತ್ತು.. ಪೆನ್ನು ಕಾಣೆಯಾಗಿದ್ದೇ ಇಲ್ಲ..! ಯಾರಾದರು ತೆಗೆದರೆ ಅದು ನನ್ ಪೆನ್ನು ಅಂತ ಎಲ್ಲರಿಗು ಗೊತ್ತಾಗಿಬಿಡುತ್ತಿತ್ತು..!

ಹಾಗಂತ ಪೆನ್ನಿನ ಮೇಲೆ ನನಗೇನು ವ್ಯಾಮೋಹ ಇರಲಿಲ್ಲ.. ನನಗೆ ಇಷ್ಟವಾದ ಪೆನ್ನು reynolds ಕಂಪನಿ white n blue ಕಲರ್ reynolds 045 bold ಅಂಥ ಬರೆದಿದ್ದ ಪೆನ್ನು... ಆಗ ಪೆನ್ನಿ ಗೆ ಇದ್ದದ್ದು 4-50 ರುಪಾಯಿ.. ಆದರೆ ಅದರ ರೆಫಿಲ್ ಗೆ 3 ರುಪಾಯಿ! 3 ರುಪಾಯಿಗೆ ಒಳ್ಳೊಳ್ಳೆಯ ಪೆನ್ನು ಸಿಗುತಿದ್ದದ್ದಲ್ಲದೆ ಅದರ ರಿಫಿಲಿಗೆ ಒಂದು ರುಪಾಯಿಯಾಗಿದ್ದರಿಂದ ನನಗೆ ಮನೆಯಲ್ಲಿ ಬಯ್ಯುತಿದ್ದರು..!

ನಮ್ ಕ್ಲಾಸಲ್ಲಿ ಕೆಲವು ಚತುರರೂ ಇದ್ದರು.. ನಮ್ ಪೆನ್ನೆಲ್ಲಾದರು ಡೆಸ್ಕ್ ಮೇಲೆ ಬಾಕಿಯಾದರೆ, ಹಿಂತಿರುಗಿ ಬಂದು ನೋಡಿದಾಗ ರಿಫಿಲ್ ಇರುತಿರಲಿಲ್ಲ...!

ಅದೇನೇ ಇರಲಿ ನನ್ ಟೀಚರ್ ನಂಗೆ ಯಾವಾಗಲು ಬಯ್ಯುತಿದ್ದದು ಹೀಗೆ ''ನೀ ಯಾವುದೇ ಪೆನ್ನಲ್ಲಿ ಬರೆದರೂ hand writing improve ಇಲ್ವಲ್ಲ..!'' M.Sc ಯವರೆಗೆ ಸಾಗಿತ್ತು ಈ ಮಾತು!

ಟೀಚರ್ ಬೇರೆಯಾದರೇನು ಬಯ್ಗುಳ ಒಂದೇ...! ಪೆನ್ನು ಯಾವುದಾದರೇನು ಅಕ್ಷರ ಅದೇ ತಾನೇ..!

Monday, 26 September 2011

ಮತ್ತೆ ಮತ್ತೆ ಗಾಂಧೀ...

ಅಕ್ಟೋಬರ್ ತಿಂಗಳು ಬರುವಾಗಲೆಲ್ಲ ನೆನಪಾಗುವ ವ್ಯಕ್ತಿತ್ವ ಗಾಂಧಿಯದ್ದು.ಗಾಂಧಿ ಭಾರತದಲ್ಲಿ ಅತಿ ಹೆಚ್ಚು ಚರ್ಚೆಗೊಳಪಟ್ಟ ವ್ಯಕ್ತಿ.. ಕೆಲವರಿಗೆ ಅವರು ಮಹಾತ್ಮ ಆದರೆ ಇನ್ನು ಕೆಲವರಿಗೆ ಅವರೇನು ಅಲ್ಲ, ಮತ್ತೆ ಕೆಲವರಿಗೆ ಭಾರತವನ್ನು ವಿಭಜಿಸಲು ಕಾರಣಿಭೂತ.. ಹೀಗೆ ಮುಂದುವರಿಯುತ್ತದೆ ಅವರ ಬಗೆಗಿನ ದೃಷ್ಟಿಕೋನ...

ಮಕ್ಕಳಿರುವಾಗ ನಮಗೆ 'ತಾತ' ಎನಿಸಿಕೊಂಡಿದ್ದು ಮಾತ್ರವಲ್ಲದೆ 'ತಟ್ಟು ಚಪ್ಪಾಳೆ ಪುಟ್ಟ ಮಗು ತಕೋ ಕೈ ಇಕೋ ಕೈ, ಗಾಂಧಿಗಿಂದು ಜನುಮದಿನ' ಎಂದು ಹಾಡಿ ಸಂಭ್ರಮಿಸಿದ್ದ ದಿನ..

ಮತ್ತೆ ಕೆಲಸಮಯದ ನಂತರ ಗಾಂಧಿಯ ಹೆಸರು ಜೊತೆ ಮಹಾತ್ಮ ಅಂತ ಯಾಕೆ ಸೇರಿತು ಅನ್ನೋದು ಸೋಜಿಗವಾಯಿತು! ಯಾಕೆಂದ್ರೆ ಅವರ ನಿಜನಾಮ ಮೋಹನದಾಸ ಕರಮ್ ಚಂದ ಗಾಂಧೀ ಎಂದು.

ನಂತರದಲ್ಲಿ ತಿಳಿಯಿತು ಕವಿ ರವಿಂದ್ರನಾಥ್ ಟಾಗೂರ ಗಾಂಧಿಯನ್ನು 'ಮಹಾತ್ಮ' ಅಂತ ಕರೆದದ್ದು.. ರವಿಂದ್ರರಿಗೆ ಗಾಂಧಿಯ ಸರಳತೆ, ನಾಯಕತ್ವ ಗುಣ ಎಲ್ಲವು ಮಿಳಿಥಗೊಂಡ ಒಂದು ಸಮೂಹ ಪ್ರಜ್ಞೆಯ ವ್ಯಕ್ತಿತ್ವ ಅಂತ ಅನಿಸಿ ಮಹಾತ್ಮನೆಂದು ಕರೆದಿರಬೇಕು..

ಮತ್ತೆ ಗಾಂಧೀ ನೆನಪಾಗುವುದು ಭಗತ್ ಸಿಂಗ್'ರ ಗಲ್ಲಿಗೇರಿಸುವ ಸಂದರ್ಭ.. ತಾನು ಅಹಿಂಸವಾದಿಯಾಗಿರುದರಿಂದ, ಹಿಂಸೆ-ಅಹಿಂಸೆ ಗಳ ಬಗೆ ತಲೆ ಕೆಡಿಸಿಕೊಳ್ಳದೆ ಹೋರಾಡುತಿದ್ದ ಭಗತ್ ಬೆಂಬಲಕ್ಕೆ ನಿಂತರೆ ತಾನು ನಂಬಿದ್ದ ತತ್ವಕ್ಕೆ ದ್ರೋಹ ಬಗೆಯುತ್ತೇನೆ ಎಂದೋ? ಅಥವ ಭಗತ್ ನಾಸ್ತಿಕನಾಗಿರುವುದರಿಂದ ಸಮೂಹ ನಾಯಕನಾದ ತಾನು, ಹೋರಾಟಕ್ಕೆ ಬೆಂಬಲ ಕಳೆದು ಕೊಳ್ಳುತೇನೋ ಎಂಬ ಭಯವೋ.. ಒಟ್ಟಿನಲ್ಲಿ ಇದುವರೆಗೆ ನನ್ನನು ದ್ವಂದ್ವದಲ್ಲಿ ಇರಿಸಿದ ಗಾಂಧಿಯ ಈ ಒಂದು ಮುಖ.. ಏಕೆಂದರೆ ಸತ್ಯ ಮತ್ತು ಅಹಿಂಸೆ ಇವೆರಡರ ಮಧ್ಯ ಆಯ್ಕೆ ಮಾಡುವ ಸಂದರ್ಭ ನಾನು 'ಸತ್ಯ' ವನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ...

ಮತ್ತೆ ಗಾಂಧೀ ನೆನಪಾಗುವುದು ವಿಭಜನೆಯ ಸಂದರ್ಭ.. ಶ್ರೇಷ್ಠತೆ ಮತ್ತು ಪೂರ್ವಾಗ್ರಹಗಳ ಮಧ್ಯ ಸಂಕುಚಿತಗೊಂಡಿರುವ ನಮ್ಮ ಮನಸ್ಸು ಭಾರತ-ವಿಭಜನೆಗೆ ಏಕವ್ಯಕ್ತಿಯನ್ನು ಹೊಣೆ ಮಾಡುತೇವೆ.. ಅಲ್ಲಿ ಎಲ್ಲರ ಪಾಲು ಇತ್ತು ಎನ್ನುವ ಸತ್ಯವನ್ನು ಮರೆಯುತೇವೆ.. ನಾಯಕನಾದವನು ತೆಗೆದು ಕೊಳ್ಳುವ ತೀರ್ಮಾನ, ಅದು ಆಗಿನ ಸತ್ಯವನ್ನು ಅವಲಂಬಿಸಿರುತ್ತದೆ ಮತ್ತು ಒಂದು ಸಮೂಹದ ತೀರ್ಮಾನ ಆಗಿರುತ್ತದೆ..
ಒಟ್ಟಿನಲ್ಲಿ ಚಿತ್ರಕಾರನ ಚಿತ್ರಕ್ಕೆ, ಲೇಖಕನ ಲೇಖನಕ್ಕೆ, ನಿರ್ದೇಶಕನ ಸಿನಿಮಾಕೆ, ಕಥೆಗಾರನ ಕಥೆಗೆ, ಹೋರಾಟಗಾರನ ಹೋರಾಟಕ್ಕೆ ಸ್ಪೂರ್ತಿಯಾಗಿದ್ದಾರೆ ...

ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ಗಾಂಧಿ ಅನ್ನುವುದು ಸಹ ವಿದ್ಯಾರ್ಥಿಗಳನ್ನು ಛೇಡಿಸುವ ವಸ್ತು.. ಕೆಲವರಿಗೆ ಅವರಿಂದ ಒಂದು ರಜೆ ಸಿಕ್ಕುತದಲ್ಲ ಎನ್ನುವ ಖುಷಿ.

ಆದರೆ ನಮ್ಮೊಡನೆ ಗಾಂಧೀ ಇಲ್ಲದಿದ್ದರೂ ಅವರು ಬಿಟ್ಟು ಹೋದ ಆದರ್ಶ, ದ್ವಂದ್ವ ಮಾತ್ರ ಕಾಡುತ್ತಲೇ ಇರುತ್ತದೆ.. ಹಾಗೆ ಗಾಂಧೀ ಎನ್ನುವ ಏಕ ವ್ಯಕ್ತಿ ಇಂದು ಜಗತಿನಾದ್ಯಂತ ಚರ್ಚಿಸಲ್ಪಡುತ್ತಿರುವ ವ್ಯಕ್ತಿತ್ವ ಅಂದರೆ ಅದು ಅವರಿಗೆ ಸಲ್ಲುತಿರುವ ನಿಜವಾದ ಗೌರವವೇ ಸರಿ..

ಕೊನೆಯಲ್ಲಿ.. ಗಾಂಧಿ ಜಯಂತಿ ಅಂದರೆ ನನಗಿಂತ ನನ್ನ ತಂಗಿಗೆ ತುಂಬಾನೇ ಖುಶಿ! ಏಕೆಂದರೆ ನಮ್ಮ ಹುಟ್ಟು ಹಬ್ಬಕ್ಕೆ ಇಲ್ಲದ ರಜೆ ಅವಳ bday ಗೆ ಸಿಗುತದಲ್ಲ!!


Monday, 19 September 2011

ಡ್ರೈವಿಂಗ್ ಸೀಟಲ್ಲಿ ಕೂತಾಗ...

ಇದೊಂಥರ ಹಾಟ್ ಸೀಟ್...! ಇಲ್ಲಿ ಕೂತಾಗ, ಸಂದರ್ಭಕ್ಕೆ ತಕ್ಕ ಹಾಗೆ ಏನಾದರು ಮಾಡುತ್ಹಿರಬೇಕು.. ಅದು ನಮಗೆ ಅನಿಸಿದ ಹಾಗೆ... ಅದೆಲ್ಲವೂ ನಮಗೆ ಸರಿಯೇ.,

ಒಮ್ಮೊಮ್ಮೆ ನಾವು ಡ್ರೈವಿಂಗ್ ಸೀಟಲ್ಲಿ ಕೂತು ಹೋಗುತ್ತಿರಬೇಕಾದರೆ ನಮ್ಮನ್ನು ಯಾರಾದರು over take ಮಾಡ್ಕೊಂಡು ಸ್ಪೀಡಲ್ಲಿ ಹೋದರೆ ನಮ್ಮ ಮನಸ್ಸಲ್ಲೇ ಅಂದುಕೊಳ್ಳುತೇವೆ... "ಅಬ್ಬ...! ಓವರ್ ಸ್ಪೀಡಲ್ಲಿ ಹೋಗ್ತಾ ಇದ್ದಾನಲ್ಲ ಇವನಿಗೇನು ಇಷ್ಟು ಅವಸರ" ಅಂತ... ಇನ್ನು ಒಬ್ಬ ನಿಧಾನವಾಗಿ ಹೊಗುತಿದ್ದರೆ 'ಅರೆ...! ಇವನು ಇವತ್ತು ಸಂಜೆ ಹೋಗಿ ಮುಟ್ಟಬಹುದು' ಅಂತ .. ಹೀಗೆ ನಾವು ಮಾಡಿದ್ದು ಮಾತ್ರ ಸರಿ.. ಒಂದು ಥರ ನಮಗೆ ನಾವೇ ' judge..' ಆದರೆ judgement ಮಾತ್ರ ಯಾವಾಗಲು ನಮ್ ಪರವೇ ಅಥವಾ ನಮ್ ವಿಷಯದಲ್ಲಿ ನಾವು 'ಲಾಯರ್ಸ್'!

ಅಂದಹಾಗೆ.. ನಮ್ಮ ಲೈಫ್ ಒಂದು ವಾಹನ ಅಂದು ಕೊಂಡರೆ, ನಾವು ಈಗ ಡ್ರೈವಿಂಗ್ ಸೀಟಲ್ಲಿ ಕೂತಿದ್ದೇವೆ..! ಇದಕ್ಕೂ ಮೊದಲು ಅಂದರೆ ನಾವು ಸಣ್ಣದಿರುವಾಗ ನಮಗೇನು ಗೊತ್ತಿರಲಿಲ್ಲ.. ಆಟವಾಡುತಿದ್ದ ಪ್ರಾಯದಲ್ಲಿ ನಮ್ಮನು parents ತಂದು ಸ್ಕೂಲ್ ಗೆ ಸೇರಿಸಿದರು... ಅದೊಂಥರ ಬಸ್ಸು ಹತ್ತಿದ ಹಾಗೆ... ನಾವು ಹೋಗಿ ಕೂತೆವು.. ಪ್ರತಿ ಸ್ಟಾಪ್ ನಲ್ಲಿ ಬಸ್ ಚೇಂಜ್ ಮಾಡ್ಕೊಂಡು ಮುಂದೆ ಬಂದು ಬಂದು, ಕೊನೆಗೂ ಒಂದು ವಾಹನ ಹತ್ತಿದೆವು.. ಅಲ್ಲಿ ಡ್ರೈವರ್ ಇಲ್ಲ.! ಇಲ್ಲಿ ನಾವು ಮುಂದೆ ಹೋಗಬೇಕಾದರೆ ನಾವೇ ಡ್ರೈವ್ ಮಾಡ್ಬೇಕು.. ಗುರಿ ದಾರಿ ಎರಡನ್ನು ಗಮನದಲ್ಲಿಟ್ಟು ಮುನ್ನಡಯಬೇಕು ..

ಅದರಲ್ಲೂ ಕೆಲವರ vehicle ಬೇಗನೆ start ಆಗಿರುತ್ತೆ.. ಮತ್ತೆ ಕೆಲವರದ್ದು ಕಿರಿಕ್..! Slow..! ಅಂತೂ ಕೆಲವರಿಗೆ ಒಳ್ಳೆ ರೋಡು ಗಳು, ಮತ್ತೆ ಕೆಲವರಿಗೆ ತಿರುವುಗಳಿಂದ ಕೂಡಿದ ಕಡಿದಾದ ರಸ್ತೆಗಳು.. ಅಬ್ಬ ಏದುಸಿರು ಬಿಡುತ್ತಾ ಹೋಗಬೇಕಾಗುತ್ತೆ! ಹಾಗಂತ ನಿಲ್ಲಿಸುವ ಹಾಗಿಲ್ಲ! gear ಅಲ್ಲಾದರೆ gear ಅಲ್ಲಿ ಹೋಗ್ತಾ ಇರಬೇಕು, ಯಾಕೆಂದ್ರೆ ಮತೊಂದು ಗ್ರೂಪ್ ಟಾಪ್ ನ ಟಾಪ್ ಅಲ್ಲಿ ಇರುತ್ತಾರೆ..

ಆಗ ನೆನಪಾಗುವುದು ನಾವು ಪ್ರಯಾಣಿಕರಾಗಿದ್ದ ಕಾಲ.. ಅಬ್ಬ ಎಷ್ಟೊಂದು ಸುಂದರವಾಗಿತ್ತು..! Student life is golden life ಅಂತ ಹೇಳಿರುವುದು ಸುಳ್ಳಲ್ಲ.. ಅಲ್ಲಿ ನಮಗೆ ಗುರಿ ಇದ್ದರೂ ಇಲ್ಲದಿದ್ದರೂ ಹೋಗುವ ದಾರಿಯ ಬಗೆ ತಲೆ ಕೆಡಿಸುತ್ತಿರಲಿಲ್ಲ .. ಸಹ ಪ್ರಯಾಣಿಕರ ಜತೆ ಆಟ, ಹರಟೆ ಹೀಗೆ time pass..

ಒಮ್ಮೊಮ್ಮೆ ಬಸ್ ಚೇಂಜ್ ಮಾಡುವ ಭರದಲ್ಲಿ ಒತ್ತಡ(exam-result)... ಸಹ ಪ್ರಯಾಣಿಕರಿಗೆ ಒಳ್ಳೆ ಸೀಟು ಸಿಕ್ಕು ನಮಗೆ ಸಿಗದಿದ್ದರೆ.. ಇಲ್ಲದಿದ್ದರೆ ಬಸ್ಸೇ ಮಿಸ್ಸಾದರೆ... ಅಂತ.. ಅದಾದ ನಂತರ enjoyment..!

ಆ ಪ್ರಯಾಣದ ಅವಧಿ ಮುಗಿದಿದೆ. ಇನ್ನೇನಿದ್ದರೂ ನಮ್ಮ ವಾಹನವನ್ನು ನಾವೇ ಚಲಾಯಿಸಬೇಕು... ಇದೊಂತರ ಹಾಟ್ ಸೀಟ್! ಕೆಲವರನ್ನು ಬೆಚ್ಚಗಿಡುತ್ತದೆ(ಸಂತೋಷ ) .. ಮತ್ತೆ ಕೆಲವರನ್ನು ಬಿಸಿಯಾಗಿರಿಸುತ್ತೆ(tension).. ಒಂಥರ ನಮಗೆ ಇಷ್ಟವಾಗದಿದ್ದರೂ ರೂಟ್ ಚೇಂಜ್ ಮಾಡಿ ಡ್ರೈವ್ ಮಾಡ್ತಾ ಇರಬೇಕು ಅಷ್ಟೇ...!



Saturday, 20 August 2011

ಸ್ವಾತಂತ್ರ್ಯದ ಕುರಿತು ಒಂದಷ್ಟು

ಸ್ವಾತಂತ್ರ್ಯ ದಿನ ಅನ್ನೋದೇ ಒಂದು ವಿಶೇಷ . ನಾವು ಪ್ರೈಮರಿ ಸ್ಕೂಲಲ್ಲಿ ಇರುವಾಗ ಯುನಿಫಾರ್ಮ್ ಹಾಕಿ ಗೆಳೆಯರ ಜತೆಗೂಡಿ ಶಾಲೆಗೇ ಹೋದರೆ, ಮೊದಲ ಕೆಲಸ ಫ್ಲಾಗ್ ಒಳಗೆ ಹಾಕಲು ಹೂವುಗಳನ್ನೂ ತಂದು ಟೀಚರ್ ಹತ್ರ ಕೊಡುವುದು, ನಂತರ ನಮ್ಮನೆಲ್ಲ ಅವರು ಸಾಲಾಗಿ ನಿಲ್ಲಿಸುತಿದ್ದರು . ಒಂಬತುವರೆಯ ಬಸ್ ಬಂದರೆ ದ್ವಜರೂಹನ್ (ಟೀಚೆರ್ಸ್ ನವರು ಬರುತಿದ್ದದು ಅದೇ ಬಸ್ಸಲ್ಲಿ).. ಅದರೊಟ್ಟಿಗೆ ಹಲವರ ಭಾಷಣ. ಅವರೇನು ಹೇಳುತಿದ್ದರೆಂದು ಅರ್ಥವಾಗುತಿಲ್ಲದ್ದರೂ ,ಪ್ರತಿ ವರ್ಷವೂ ಅದೇ ಭಾಷಣ ಅಂಥ ತಿಳಿಯುತ್ತಿತ್ತು . ಹಾಗೆ ನಮ್ಮನು ೪೫ ನಿಮಿಷಕ್ಕೂ ಅಧಿಕ ಬಿಸಿಲಲ್ಲಿ ನಿಲ್ಲಿಸಿ ಅವರು ನೆರಳಲ್ಲಿ ನಿಂತು ಭಾಷಣ ಮಾಡುತಿದ್ದರು(ಮಳೆ ಬಂದರೆ ಕುಶಿಯೋ ಕುಶಿ). ಅದೆಲ್ಲ ಅದ ನಂತರದಲ್ಲಿ, ನಾವು ನಿಂತಲ್ಲಿಗೆ ಬಂದು ಒಂದೋ ಎರಡೋ ಚಾಕಲೇಟು ಕೊಡುತಿದ್ದರು. ಜನಗನದೊಂದಿಗೆ ಅವತಿನ ಕಾರ್ಯಕ್ರಮ ಮುಕ್ತಾಯ.ಇದರ ನಂತರ ನಮಗೆ ಸಂಪೂರ್ಣ ಸ್ವಾತಂತ್ರ್ಯ. ಯುನಿಫಾರ್ಮ್ ಬದಲಿಸಿ ಗ್ರೌಂಡ್ ಕಡೆ ನಮ್ಮ ಪಯಣ.

ಇನ್ನು ಹೈಸ್ಕೂಲ್ ಸ್ವಾತಂತ್ರ್ಯೋತ್ಸವಕ್ಕೆ ಘನತೆ , ಗಾಂಭಿರ್ಯತೆ ಸ್ವಲ್ಪ ಜಾಸ್ತಿ-ಯುನಿಫಾರ್ಮ್ ಹುಡುಗರಿಗೆ ಪ್ಯಾಂಟ್ ಗೆ ಬಡ್ತಿ ಆಗಿರುವುದು. ಮತ್ತು ಸಿಹಿ ತಿಂಡಿ ಲಡ್ಡು ಕೊಡುವುದು . ಆದರೆ ಪ್ರೈಮರಿಯಲ್ಲಿದ್ದ ಸ್ವಾತಂತ್ರ್ಯ(ಆಡುವ ) ಇಲ್ಲಿ ಮೊಟಕುಗೋಳ್ಳುತಿದ್ದವು. ಏಕೆಂದರೆ ದ್ವಜರೋಹನ ಅದ ನಂತರ ಸ್ಟೇಜ್ ಪ್ರೊಗ್ರಾಮ್ -ಡಾನ್ಸ್, ಸ್ಪರ್ಧೆ ಇರುತಿದ್ದವು . ಯಾರೋ ಬರೆದು ಕೊಟ್ಟ ಪ್ರಭಂದಗಳನ್ನೂ, ಭಾಷಣಗಳನ್ನು ಉದ್ದುದವಾಗಿ ಬಿಗಿದು ಪ್ರಶಸ್ತಿಯತ್ತ ದಾಪುಗಲಿಡುತಿದ್ದೆವು . ನಾವು ಏನು ಹೇಳುತಿದ್ದೆವೋ, ಕೇಳುತಿದ್ದೆವೋ ನಮಗೇ ಅರ್ಥ ಅಗುತಿರಲಿಲ್ಲ. ಅಂತೂ ಪ್ರೈಮರಿಯಲ್ಲಿ ಒಂದು ಗಂಟೆಯಲ್ಲಿ ಮುಗಿಯುತಿದ್ದ ಸ್ವಾತಂತ್ರ್ಯೋತ್ಸವ ಇಲ್ಲಿ ಮಧ್ಯಾಹ್ನ ದವರೆಗೂ ಇರುತಿತ್ತು . ಮತ್ತೆ ಜೆ.ಸಿ , ಲಯನ್ಸ್ ಕ್ಲಬ್ ಮತ್ತು ಇನ್ನಿತರ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಹೆಸರು ಕೊಟ್ಟಿದ್ದರೆ ಅಲ್ಲಿಯೂ ಭಾಷಣ ಡಾನ್ಸ್, ಸ್ಕಿಟ್ , ಮತ್ತು ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಿಕ್ಕಿದರೆ ಪ್ರೈಸ್ ಇಲ್ಲದಿದ್ದರೆ ಸ್ವೀಟ್ ಮಾತ್ರ ತಗೊಂಡು ಮನೆ ಕಡೆ ಮುಂದಿನ ಪಯಣ.ಇಡಿ ದಿನದ ರಿಪೋರ್ಟನ್ನು ಮನೆಯಲ್ಲಿ ಹೇಳಬೇಕಾಗಿತ್ತು .

ಕಾಲೇಜ್ ಮೆಟ್ಟಿಲು ಹತ್ತಿದ ನಂತರ ಸ್ವಾತಂತ್ರ್ಯೋತ್ಸವ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ಯವರಿಗೆ ಮಾತ್ರ ಅನ್ನುವುದು ಅಲಿಖಿತ ನಿಯಮ.ಒಂದು ಕಡೆ ಎನ್ ಸಿ ಸಿ ಯವರ ಬೂಟಿನ ಶಬ್ದ ಕ್ಯಾಂಪಸ್ಸಲ್ಲಿ ಕೇಳಿದರೆ ಇನ್ನೊಂದು ಕಡೆ ಎನ್ ಎಸ್ ಎಸ್ ನವರ ಸ್ಟೇಜ್ ಪ್ರೋಗ್ರಾಮ್ . ಹಾಸ್ಟೆಲ್ ಜನ ಇಲ್ಲದೆ ಬಣ ಗುಟುತ್ತಿರುತದೆ. ರಜೆ ಸಿಕ್ಕಿದ ಕೂಡಲೇ ಮನಗೆ ಓಡುವ ಮಂದಿಯೇ ಜಾಸ್ತಿ..

ಪಿ ಜಿ ಮಾಡುವಾಗ ಯಾವುದರ ಪರಿವೆಯೇ ಇರಲ್ಲ. ಅಷ್ಟು ಬ್ಯುಸಿ. ಕೆಲವೊಮ್ಮೆ ಫ್ರೀ ಇದ್ದರೆ ಸರ್ಕಾರಿ ಪ್ರಾಯೋಜಿತ ಸ್ವಾತಂತ್ರ್ಯೋತ್ಸವ ನೋಡಲು ಹೋದರೆ ಬರಿ ಬೋರು. ಅದು ಅವರ ಪ್ರಚಾರ ಕಾರ್ಯಕ್ರಮದ ತರ ಇರುತೆ. ಒಂದಷ್ಟು ಆಶ್ವಾಸನೆ ಮತ್ತಷ್ಟು ತಮ್ಮ ಸರ್ಕಾರದ ಸಾಧನೆಗಳ ಪಟ್ಟಿ ಹೀಗೆ, ನಮ್ಮ ಕಿವಿಗೆ ಕಹಿಯಾಗುವ ಭಾಷಣ. ಪೋಲಿಸ್ ನವರ ಪಥ ಸಂಚಲನವಂತು ನಗು ಬರುವ ಥರ ಇರುತೆ. ಕೆಲವರ ಹೊಟ್ಟೆ ಅವರಿಗಿಂತ ಮೊದಲು ಹೋಗುತಿರುತದೆ, ಮತ್ತೆ ಕೆಲವರು ಬಲವಿಲ್ಲದವರ ಹಾಗೆ ನದೆಯುತಿರುತಾರೆ.

ಕಾಲೇಜ್ ಬಿಟ್ಟ ನಂತರ ಸಾತಂತ್ರ್ಯ ದಿನ ಅನ್ನುವುದು ಚಾತಕ ಪಕ್ಷಿ ಯಂತೆ ಕಾಯುವ ದಿನ. ಅದು ಶುಕ್ರವಾರ ಅಥವಾ ಸೋಮವಾರ ಬಂದರೆ ಆನಂದಕ್ಕೆ ಪಾರವೇ ಇಲ್ಲ. ಏಕೆಂದರೆ ದೀರ್ಘ ಕಾಲ ರಜೆಯನ್ನು ಮಜಾ ಮಾಡಬಹುದೆನ್ನುವ ಸಂತೋಷ. ಬೆಳಿಗ್ಗೆ ಟಿವಿ ಯಲ್ಲಿ independence day ಪ್ರೊಗ್ರಾಮ್ ಅನ್ನು ನೋಡಿ, ನಂತರ ಫ್ರೆಂಡ್ಸ್ ಜೊತೆ ಸಿನಿಮಾ,ಹೋಟೆಲ್ ಪಾರ್ಕ್ ಹೀಗೆ ಕಾಲ ಕಳೆಯುವುದು ಅವತಿನ ದಿನಚರಿ.
ಒಮ್ಮೊಮ್ಮೆ ಸ್ವಾತಂತ್ರ್ಯ ಅನ್ನುದು ಕೇವಲ ಆಚರಣೆಗೆ ಸಿಮಿತ ವಾಗಿದೆ ಅನಿಸುತದೆ. ಒಂದು ಕಡೆ ನಾವು ಸ್ವಾತಂತ್ರ್ಯದಿಂದ ಸಂತುಷ್ಟರಗಿದ್ದೇವೆ, ಪರಿಪೂರ್ಣ ರಾಗಿದ್ದೇವೆ ಅಂದು ಕೊಳ್ಳುತಿರುವಾಗಲೇ ಅದೆಷ್ಟೋ ಮಂದಿ ಸ್ವಾತಂತ್ರ್ಯ ರಹಿತ ಬದುಕು ಸಾಗಿಸುತಿದ್ದಾರೆ . ಒಂದು ಕಡೆ ಹೊಟ್ಟೆ ಉಬ್ಬುವಷ್ಟು ತಿನ್ನುವ ಮಂದಿ ಯಿದ್ದರೆ ಇನ್ನೊಂದು ಕಡೆ ಹೊಟ್ಟೆಗಿಲ್ಲದೆ ಪರದಾಡುತಿರುವವರ ದಾರುಣ ಸ್ಥಿತಿ(ಭಾರತದಲ್ಲಿ ಬಡವರದ್ದು ಮತು ಶ್ರೀಮಂತರ ಎರಡು ಪ್ರತ್ಯೇಕ ದೇಶ ಇದೆಯೇ ? ಅನ್ನೋದು ಇತ್ತೀಚೆಗೆ ಸುಪ್ರಿಂ ಕೋರ್ಟ್ ಕೇಳಿದ ಪ್ರಶ್ನೆ).ಅಂದರೆ ಸ್ವಾತಂತ್ರ್ಯ ಅನ್ನೋದು ದುರುಪಯೋಗವಾಗುತಿದೆ ಅಂಥ ಅನ್ನಿಸುತದೆ ಅಲ್ಲವೇ?

ಮೊನ್ನೆ ತಾನೆ ಎನ್ ಆರ್ ಐಯ್ ಒಬ್ಬರು ನನಲ್ಲಿ ಮಾತಾಡ್ತ ಹೇಳಿದರು “ನಾನು ಹಲವಾರು ದೇಶಗಳನ್ನು ನೋಡಿದ್ದೇನೆ ಆದರೆ ಅಲ್ಲಿ ಹೋದಾಗಲೆಲ್ಲ ಇಂಡಿಯಾ ದ ಮಹತ್ವ ಅರಿವಾಗುವುದು” ಅನ್ನುವುದು. ಹೌದು ಸ್ವಾತಂತ್ರ್ಯಅನ್ನುವುದು ಅತ್ಯುನ್ನತ ವಾದದ್ದು, ಅದನ್ನು ರಕ್ಷಿಸುವುದು ನಮೆಲ್ಲರ ಕರ್ತವ್ಯ ಅಲ್ಲವೇ