Monday, 28 November 2011

ತಣ್ನೀರುಬಾವಿಯಲ್ಲಿ ಒಂದು ಸಂಜೆ...


ಸೂರ್ಯಾಸ್ತಮಾನಕ್ಕೆ ಕೆಲವೇ ಕ್ಷಣಗಳಿದೆಯೆನ್ನುವಾಗ, ಇನಿಯನ ಬರುವಿಕೆಯಿಂದಾಗಿ ನಲ್ಲೆಯ ಮುಖ ನಸುಗೆಂಪು ಆಗುವ ಹಾಗೆ ಸಮುದ್ರವಿಡೀ ಹೊಂಬಣ್ಣಕ್ಕೆ ತಿರುಗಿತ್ತು.. ಮತ್ತೆ ಶಾಂತವಾಗಿರದೆ, ಅಗಲುವಿಕೆಯ ನಂತರದ ಕಾತರದಿಂದ ಪ್ರಿಯತಮೆ ತನ್ನೆರಡು ಕೈಗಳನ್ನು ಪ್ರೇಮಿಯತ್ತ ತೋರಿಸಿ ಆಲಿಂಗನಕ್ಕೆ ಕರೆಯುವಂತೆ ಸೂರ್ಯನತ್ತ ಅಲೆಗಳನ್ನು ಎಬ್ಬಿಸಿ ಆರ್ಭಟಿಸುತಿತ್ತು.. ಸೂರ್ಯನು ಪ್ರಿಯತಮೆಯ ಕರೆಗೆ ಓಗೊಟ್ಟ ಪ್ರೇಮಿಯಂತೆ ಬೇಗನೆ ಸಮುದ್ರದೆಡೆಗೆ ಜಾರುತಿದ್ದ.

ಅದನ್ನೇ ನೋಡುತ್ತಾ ಅದೆಷ್ಟೋ ಮಂದಿ ಮರಳ ದಂಡೆಯಲ್ಲಿ ಕೂತು ತಮ್ಮ ಏಕಾಂಗಿತನವನ್ನು ಕಳೆಯುತಿದ್ದರು.. ತುಟಿಪಿಟಿಕೆನ್ನದೆ, ಎವೆಯಿಕ್ಕದೆ ತದೇಕಚಿತ್ತದಿಂದ ಈ ಅಪೂರ್ವ ಕ್ಷಣವನ್ನು ಆಸ್ವಾದಿಸುತ್ತಿದ್ದರು. ಅಲ್ಲಲ್ಲಿ ಚದುರಿ ಹೋದಂತೆ ಹಲವಾರು ಪ್ರೇಮಿಗಳು ತಮ್ಮ ಪ್ರಿಯತಮೆಯ ಸುತ್ತ ತಮ್ಮ ತೋಳುಗಳನ್ನು ಬಳಸಿ ಅದೇನೋ ಪಿಸುಗುಟ್ಟುತಿದ್ದಾರೆ.. ಕೆಲವಾರು ಹೆಂಗಸರು ಅಂದ ಚೆಂದದ ಬಟ್ಟೆಗಳನ್ನು ತೊಟ್ಟು ತಮ್ಮ ಒರಗೆಯವರೋಟ್ಟಿಗೆ, ಗೆಳತಿಯರೊಟ್ಟಿಗೆ ಸಮುದ್ರದ ಆರ್ಭಟಕ್ಕೆ ಪ್ರತಿಸ್ಪರ್ಧಿ ಎನ್ನುವಂತೆ ಮಾತಿನಲ್ಲಿ ತಲ್ಲೀನರಾದ್ದರೆ, ಅವರ ಮಕ್ಕಳೋ ಮನೆಯಿಂದ ಹೊತ್ತು ತಂದ ಆಟಿಕೆಗಳನ್ನು ಕೂಡಿ ಹಾಕಿ ಆಟವಾಡುತಿದ್ದರೆ, ಮತ್ತೆ ಕೆಲವರು ತಮ್ಮ ಗಾಳಿಪಟವನ್ನು ಮೇಲೆ ಆಗಸಕ್ಕೆ ಹಾರಿಸುವ ಪ್ರಯತ್ನದಲ್ಲಿದ್ದಾರೆ.. ಒಬ್ಬ ಹುಡುಗನ ಗಾಳಿಪಟ ಮಾತ್ರ ಮೇಲೆ ಹಕ್ಕಿಗಳ ಮಧ್ಯೆ ಸ್ಠಾನ ಗಿಟ್ಟಿಸಿಕೊಂಡು ಹಾರುತ್ತಿತ್ತು, ಅವ ಅದನ್ನು ಸಂತೋಷದಿಂದ ನೋಡಿ ಹಿರಿಹಿರಿ ಹಿಗ್ಗುತಿದ್ದರೆ, ಅಲ್ಲೇ ಇದ್ದ ಇತರ ಮಕ್ಕಳು ತಾವು ಅವನೆತ್ತರಕ್ಕೆ ಹಾರಿಸಬೇಕೆಂದು ಹಟದಲ್ಲಿ ಬಿದ್ದಿದ್ದರು.


ಕೆಲವರು ಗಂಡಸರಂತೂ ಅದ್ಯಾವುದರ ಪರಿವೆಯಿಲ್ಲದೆ, ಯಾವುದೋ ಪಾರ್ಟಿ ಗೆ ಬಂದವರಂತೆ ತಮ್ಮ ಕೆಲಸ, ಬ್ಯುಸಿನೆಸ್, share ಮಾರ್ಕೆಟ್, ಪೊಲಿಟಿಕ್ಸ್ ಹೀಗೆ ತಮ್ಮದೇ ಗಾಂಭೀರ್ಯದಲ್ಲಿ ತಮ್ಮ ಸಹವರ್ತಿಗಳೊಡನೆ ಮಾತನಾಡುತ್ತ ಇದ್ದಾರೆ..

ಇತ್ತ ಅದೇ ಊರಿನಲ್ಲಿನ ಜನರು 'ಕಡಲು' ನಮಗೆ ಸಾಮಾನ್ಯ ಎಂಬ ಮನಸ್ಠಿತಿಯೊಂದಿಗೆ ಅಲ್ಲೇ ದೂರದಲ್ಲಿ ತಮ್ಮ ಕೆಲಸದೊಂದಿಗೆ ಓಡಾಡುತಿದ್ದಾರೆ..

ಹಾಗೆ ಇದೆಲ್ಲವನ್ನು ಅಕ್ಷಿ ಪಟಲದಲ್ಲಿ ತುಂಬಿಕೊಂಡು ನಾನು ಮತ್ತು ಗೆಳೆಯ ಮುಂದೆ ಹೋಗುತಿರಬೇಕಾದರೆ ಅಲ್ಲೇ ದೂರದಲ್ಲಿ ಮರಳ ರಾಶಿ ಕಂಡು ಕುತೂಹಲಗೊಂಡು ಅದರತ್ತ ಹೋದೆವು.. ಅಲ್ಲಿ ಅಗಾಧ ಮರಳರಾಶಿಯ ಮಧ್ಯ ದೊಡ್ಡ ಹೊಂಡ ತೆಗೆದಿತ್ತು.. ಅದೊರಳಗೆ ಒಂದು ಹಿಟಾಚಿ ಮತ್ತೊಂದು boat ಇತ್ತು.. ಅಲ್ಲಿಯ ಮರಳು ಎಲ್ಲಿ ಹೋಗಿದೆಯೆಂದು ಚಿಂತಿಸುವಾಗ, ಮೂರೂ ಜನ ನಮ್ಮನ್ನು ಯಾವುದೋ ಊರಿನ ಜಮೀನ್ದಾರರು ಅನ್ನುವಂತೆ ನೋಡುತಿದ್ದರು.. ಅವರಲ್ಲಿ ಈ ಬಗೆ ಕೇಳಿದಾಗ 'ಗೊತ್ತಿಲ್ಲ' ಅನ್ನೋ ಸಿದ್ದ ಉತ್ತರ ಬಂತು. 'ನೀವು ಎಲ್ಲಿಯವರಪ್ಪ' ಅಂತ ಕೇಳಿದಾಗ.. ತಮ್ಮ ಹೊಟ್ಟೆಪಾಡಿಗಾಗಿ ದೂರದ ಜಾರ್ಖಂಡ ನಿಂದ ಇಲ್ಲಿಗೆ ಬಂದು ಇದೇ ಮರಳ ಗುಂಡಿಯಲ್ಲಿ ಕಾರ್ಮಿಕ ಆಗಿ ದುಡಿಯುತಿದ್ದಾರೆ. ಅದರಲ್ಲೊಬ್ಬ ಹೇಳಿದ ಇಲ್ಲಿಂದ ಮರಳನ್ನು ಸಮುದ್ರಡೆಗೆ ಕೊಂಡೊಯ್ಯುತ್ತಾರೆಂದ. ಅಲ್ಲೇ ದೂರದಲ್ಲಿ, ಸಮುದ್ರದಲ್ಲಿ ಅದೇನೋ ಪೋರ್ಟ್ ಗೆ ಸಂಬಂದಿಸಿದ ಕೆಲಸ ನಡೆಯುತಿದೆ.. ಇನ್ನು ಈ ಕಡೆ ಬರಲು ಅಸಾಧ್ಯವೋ ಏನೋ ಎಂದು ಯೋಚಿಸುತ್ತ ಅಲ್ಲಿಂದ ಕಾಲ್ತೆಗೆದೆವು.. ಅತ್ತ ಸೂರ್ಯ ತನ್ನ ಪ್ರಿಯತಮೆಯಲ್ಲಿ ಅನುರಕ್ತನಾಗಿ, ಇಬ್ಬರು ಗಾಢಾಲಿಂಗನದಲ್ಲಿದ್ದಂತೆ ತೋರಿತು..

ಅವರಿಗ್ಯಾಕೆ ತೊಂದರೆ ಕೊಡುವುದೆಂದು ಅಲ್ಲಿಂದ ಹಿಂದಿರುಗಿ ಬರುವಾಗ, ಮರಳಲ್ಲಿ ಜತೆ ಜತೆ ಯಾಗಿ ಕುಳಿತಿದ್ದ ಪ್ರೇಮಿಗಳು ಸಮಾಧಿ ಸ್ತಿತಿ ಅಂದ್ರೆ ಸೂರ್ಯ- ಸಮುದ್ರದ ಸ್ತಿತಿಯಲ್ಲಿದ್ದರು.. ಹೆಂಗಸರು ತಮ್ಮ ಗಂಡಂದಿರ ಹಿಂದೆ ಹೊರಡಲನುವಾಗುತಿದ್ದರು. ಹುಡುಗನೊಬ್ಬ ಮೇಲೆ ಹಾರಿಸುತಿದ್ದ ಗಾಳಿಪಟ ತನ್ನ ದಾರದೊಂದಿಗಿನ ಸಂಬಂದ ಕಡಿದು, ತನಗೂ ಅವನಿಗೂ ಪರಿಚಯವೇ ಇಲ್ಲದ ಹಾಗೆ ಗಾಳಿಯಲ್ಲಿ ತೇಲಿ ಹೋಗುತ್ತಾ ಇದ್ದ ದೃಶ್ಯವನ್ನು ಬೇಸರದಿಂದ ನೋಡುತ್ತಾ ಇದ್ದ. ಇದನ್ನು ನೋಡಿದ ಇತರ ಮಕ್ಕಳು ತಮ್ಮ ಹಾರಿಸಲಾಗದೆ ಇದ್ದ ಗಾಳಿಪಟವನ್ನು ಇನ್ನಷ್ಟು ಬಿಗಿಯಾಗಿ ಹಿಡಿದು ಕೊಂಡು ತಮ್ಮ ಕಾರಿನತ್ತ ಹೋಗುವಾಗ ಅವರ ಮುಖದಲ್ಲಿ ನೆಮ್ಮದಿಯ ನಿಟ್ಟುಸಿರು ಕಾಣುತಿತ್ತು.. ಇದೆಲ್ಲವನ್ನು ನೋಡುತ್ತಾ ನಾನು ಮತ್ತು ಗೆಳೆಯ ಅಲ್ಲಿಂದ ಹೊರಡಲನುವಾದೆವು..

ಅಲ್ಲೇ ಪೂರ್ವದಲ್ಲಿ, ಸ್ವಲ್ಪ ದೂರದಲ್ಲಿ ಫಲ್ಗುಣಿ ನದಿ ಪ್ರಶಾಂತವಾಗಿ ಕಡಲಿನೆಡೆಗೆ ಹರಿಯುತಿತ್ತು. ತಂಗಾಳಿ ಇನ್ನಷ್ಟು ಜೋರಾಗಿ ಬೀಸುತಿತ್ತು .. ಅದನ್ನು ದೂರದ ಊರಿಂದೆಲ್ಲಿಂದಲೋ ಬಂದ ಒಂದಷ್ಟು ಜನ ನೋಡುತ್ತಾ ನಿಂತಿದ್ದನು ನೋಡಿ ಗೆಳೆಯ ನನ್ನಲ್ಲಿ '' ಇವರು ತಮ್ಮ ಊರಿಗೆ ಹೋಗಿ ಈ ನದಿಯನ್ನೇ ಸಮುದ್ರ ಎಂದು ಬಣ್ಣಿಸದಿದ್ದರೆ ಸಾಕು ಅಂತ'' ಹೇಳಿ ಗೇರ್ ಬದಲಾಯಿಸಿದ..

Tuesday, 22 November 2011

ಗೋಡೆಯಾಚೆಗಿನ ನೋಟ

ಒಂದು ಕ್ರಿಯೆಗೆ ಅದರದೇ ಆದ ನೇರ ಅಥವಾ ವಿರುದ್ದವಾದ ಪ್ರತಿಕ್ರಿಯೆ ಇರುತ್ತದೆ. ಇದು ನ್ಯೂಟನ ಸಿದ್ದಾಂತ... ಈ ಸಿದ್ದಾಂತವನ್ನು ಹುಸಿ ಮಾಡಿದವನಿದ್ದರೆ ಅದು ರಾಹುಲ್ ದ್ರಾವಿಡ್ ಮಾತ್ರ ಅಂತ ಅನಿಸುತ್ತದೆ. ಅಕ್ತರ್, ಲೀ ಯಂತ ಘಟಾನುಘಟಿ ಗಳು ಗಳು ಮೈದಾನದ ಒಂದಂಚಿನಿಂದ ಏದುಸಿರು ಬಿಡುತ್ತಾ ಬಂದು ಚೆಂಡನ್ನು ಎಸೆದಾಗ, ಅದರ ವೇಗ ಗಂಟೆಗೆ ಸುಮಾರು 125 ರಿಂದ 145 ರಷ್ಟು ಇರುತ್ತದೆ.. ಆದರೆ ಅದನ್ನು ಕಲಾತ್ಮಕ ಶೈಲಿಯಲ್ಲಿ ಅಲ್ಲೇ ನಿಲ್ಲಿಸುವ ತಾಕತ್ತು ದ್ರಾವಿಡ್ ಗಲ್ಲದೆ ಇನ್ನ್ಯಾರಿಗೆ ಸಾದ್ಯ? ಪಾಪ! ಆ ಬೌಲರಿಗೆ ಇದೊಂತರ ಅವಮಾನ ಮಾಡಿದ ಹಾಗೆ!

ಬ್ಯಾಟಿಂಗ್ ಶೈಲಿ ನಿಧಾನವಾದರೂ ಸುಂದರವಾಗಿರುತ್ತದೆ.. ಕೆಲವೊಮ್ಮೆ ಬೋರಾಗಿ ಒಮ್ಮೆ ಔಟಾಗಬಾರದೆ ಅಂತ ಅನಿಸುವುದುಂಟು! ಎದುರಾಳಿಗಳ ಪ್ರಖರ ದಾಳಿಗೆ high profile ಬ್ಯಾಟ್ಸಮನ್ ಗಳು ಸಾಲಾಗಿ ಪೆವಿಲಿಯನ್ ನತ್ತ ಮುಖ ಮಾಡಿದಾಗ, ಒಂದು ಕಡೆ ದ್ರಾವಿಡ್ ಮಹಾ ಗೋಡೆಯಂತೆ ನಿಂತು partnership ಬಿಲ್ಡ್ ಅಪ್ ಮಾಡುವಾಗ ಅವನಿಗೆ ಪರ್ಯಾಯವೇ ಇಲ್ಲ ಅಂತ ಅನಿಸುತ್ತದೆ.. ಹಾಗೆ ಆಡಿ ಅದೆಷ್ಟೋ ಸಲ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದಾನೆ! ಅವನ ಆಟದ ಅಂಕಿ ಅಂಶ ನೋಡಿದರೆ ಹೆಚ್ಹಿನವು ಭಾರತವನ್ನು ಹೀನಾಯ ಸೋಲಿನಿಂದ ತಪ್ಪಿಸಿದಂತವು.. ಯಾವತ್ತು ತಾನು ಸ್ವಾರ್ಥಕ್ಕೆ ಆಡದೆ, ತಂಡಕ್ಕಾಗಿಯೇ ಆಡಿದ ದ್ರಾವಿಡ್ ಅನಿವಾರ್ಯ ಸಂದರ್ಭದಲ್ಲಿ ವಿಕೆಟ್ ಕೀಪಿಂಗ್ ಸಹ ಮಾಡಿದ್ದರಲ್ಲದೆ ಒಟ್ಟಾರೆ 200 ಕ್ಕಿಂತ ಅಧಿಕ ಕ್ಯಾಚ್ ಹಿಡಿದ ದಾಖಲೆಯನ್ನು ತನ್ನದಾಗಿಸಿದ್ದಾರೆ. ಸಚಿನ್ ನಷ್ಟು ಶತಕ ಹೊಡೆಯದಿದ್ದರೂ ODI ಮತ್ತು ಟೆಸ್ಟ್ ಎರಡರಲ್ಲೂ 10 ಸಾವಿರ ರನ್ ಮಾಡಿದ ಸಾಧನೆಯನ್ನು ತನ್ನ ಮುಡಿಗೇರಿಸಿ ಕೊಂಡಿದ್ದಾನೆ!

ತನ್ನ ಹದಿನೈದು ವರ್ಷದ ಕ್ರೀಡಾ ಜೀವನದಲ್ಲಿ ಕ್ರಿಟಿಕ್ಸ್ ದ್ರಾವಿಡ್ ನನ್ನೂ ಬಿಟ್ಟಿಲ್ಲ.. ಹಲವು ಸಲ ಬ್ಯಾಟಿಂಗ್ ಶೈಲಿಯ ಬಗೆ ಮಾಜಿ ಆಟಗಾರರಿಂದ ಟೀಕೆಯ ಸರಮಾಲೆಯನ್ನೇ ಅನುಭವಿಸಿದ್ದಿದೆ.. ಅವನ ಸಾಧನೆಯೆದುರು ಅದೆಲ್ಲವೂ ಗೌಣವಾಗಿದೆ. ಆದರೆ ಎರಡು ಸಲ ದ್ರಾವಿಡ್ ನಡೆ ತೀವ್ರ ಚರ್ಚೆಗೊಳಪಟ್ಟಿದೆ.. ಒಂದು ಸಚಿನ್ 196 ರನ್ ಮಡಿ ಕ್ರಿಸ್ ನಲ್ಲಿದ್ದಾಗ ಡಿಕ್ಲೇರ್ ಮಾಡಿದ್ದೂ, ಮತ್ತೊಂದು ಆಕಸ್ಮಿಕವಾಗಿ ಬಾಲ್ ಗೆ chewing gum ತಾಗಿ ವಿರೂಪಗೊಳಿಸಿದ ಆರೋಪ..

ಹೀಗೆ ODI ಟೆಸ್ಟ್ ಎರಡರಲ್ಲೂ ಉತ್ತಮ ಸಾಧನೆ ಮಾಡಿದ ದ್ರಾವಿಡ್ ಇತ್ತೀಚಿಗೆ ಆಡಿದ ಏಕೈಕ T20 ಯಲ್ಲಿ 3 ಸಿಕ್ಸರ್ ಬಾರಿಸಿ ಎಲ್ಲರ ಹುಬ್ಬು ಮೇಲೇರುವಂತೆ ಮಾಡಿದ..

ಸಚಿನ್ ಸೆಹ್ವಾಗ್ ನಂತಹ ಬ್ಯಾಟ್ಸಮನ್ ಆಡುವಾಗ ಇನ್ನೊಂದು ಬದಿಯಲ್ಲಿ ವಿಕೆಟ್ ಕಾಪಿಡುತ್ತಿದ್ದದು ದ್ರಾವಿಡ್. ಹೀಗೆಯೇ 80 ಸಲ 100 ಕ್ಕಿಂತ ಅಧಿಕ partnership ನಲ್ಲಿ ಭಾಗಿಯಾದ ದ್ರಾವಿಡ್, ಸಚಿನ್ ನೊಂದಿಗೆ 18 ಸಲ ಈ ಸಾಧನೆ ಮಾಡಿದ್ದಾನೆ.

ಹೀಗೆ 'slow n steady' ದ್ರಾವಿಡ್ ಮಾಡಿದ ಸಾಧನೆಗಳು ಕ್ರಿಕೆಟ್ ಲೋಕದಲ್ಲಿ ಗಮನಾರ್ಹವಾದರೂ , ಸಚಿನ್ ಯುಗದಲ್ಲಿ ಎಲೆಮರೆಯ ಕಾಯಿಯಾಗಿ ಹೋಗಿದ್ದಾನೇನೋ ಅಂತ ಅನಿಸುತ್ತದೆ!

Monday, 14 November 2011

ಕನಸಿನಲ್ಲಿ ಐಶ್ ಬೇಬಿ...!

ಐಶ್ವರ್ಯ ರೈ ಅಂದ ತಕ್ಷಣ ನೆನಪಾಗುವುದು hum dil de chuke sanam ನ ನಂದಿನಿ, ದೇವದಾಸ್ ನ ಪಾರು..! ಅಂತು hum dil de chuke sanam ನಲ್ಲಿ ಸಲ್ಮಾನ್ ಮೆಣಸು ತಿನ್ನುವಾಗ ಗಟಗಟನೆ ನೀರು ಕುಡಿಯುವ ಅವಳು ಚಿತ್ರದುದ್ದಕ್ಕೂ ಸಲ್ಮಾನ್ ನ ಪ್ರೀತಿಗಾಗಿ ಹಪಹಪಿಸುತ್ತಾಳೆ.. ಅಂತೂ ಅವಳು ಸಲ್ಮಾನ್ ನನ್ನು ಮಾತ್ರವಲ್ಲ ತುಂಬಾ ಜನರ ನಿದ್ದೆಗೆಡಿಸಿದವಳು.. ಆ ಇಡೀ ಫಿಲಂ ನಲ್ಲಿ ಅವಳ ನಟನೆ ಮತ್ತು ಸೌಂದರ್ಯದ ನಡುವೆ ಸ್ಪರ್ದೆ ಇದ್ದಂತಿತ್ತು.. ಕೊನೆಗೂ ಅವಳ ಸೌಂದರ್ಯವೇ ನಮಗೆ ಇಷ್ಟವಾಗುವುದು.. 'ಪ್ರೀತಿಸಿದವನೊಬ್ಬ, ಮದುವೆಯಾಗುವವನು ಮತ್ತೊಬ್ಬ..' ಇ ದು ಅವಳ ನಿಜ ಜೀವನದ ಕಥೆ ಮಾತ್ರವಲ್ಲ,ಅವಳ ಹಲವು ಚಿತ್ರದ ಕತೆಯು ಹೌದು.. Hum dil de chuke sanam ನ ಕತೆಯು ಹೌದು.. ಅಂತೂ ಹಿಂದಿ ಚಿತ್ರರಂಗ ಈ ಚಿತ್ರದ ಮೂಲಕ ಅವಳನ್ನು ಗುರುತಿಸಿತಲ್ಲದೆ, film fare award ಸಹ ಬಂತು.. ಇನ್ನೊಂದು intresting ವಿಷಯ ಅಂದರೆ ಅವಳಿಗೆ ಎರಡು film fare award ಬಂದಿರುವುದು ಸಹ ಒಬ್ಬನೇ direction ನ ಫಿಲಂ( ಇನ್ನೊಂದು ದೇವದಾಸ್- ಸಂಜಯ್ ಲೀಲಾ ಬನ್ಸಾಲಿ).

ಸೌಂದರ್ಯ ಮಾತ್ರ film ಇಂಡಸ್ಟ್ರಿ ನಲ್ಲಿ ಮಾನದಂಡ ಆಗಿದಿದ್ದರೆ ಅವಳು ಯಾವತ್ತೋ ಹಿಟ್ ಆಗಬೇಕಿತ್ತು. ಆದರೆ ಅವಳು film ಇಂಡಸ್ಟ್ರಿ ಎಂಟ್ರಿ ಕೊಡುವಾಗ ಕಾಜಲ್, ಜೂಹಿ, ಮಾಧುರಿ ಯಂತಹ ಘಟಾನು ಘಟಿಗಳ ಎದುರಿಗೆ ಮಿಂಚಲು ನಾಲ್ಕೈದು ವರ್ಷ ಕಾಯ ಬೇಕಾಯಿತು.. ಮತ್ತೆ ಹಲವು film ನಲ್ಲಿ ನಟಿಸಿದರೂ film ಗಿಂತ ಗಾಸಿಪ್ ನಲ್ಲಿ ಹೆಚ್ಚು ಪ್ರಸಿದ್ದಳಾದದ್ದು.. ಅದರಲ್ಲಿ ಮುಖ್ಯವಾಗಿ ಸಲ್ಮಾನ್ 'ಪ್ರೇಮ ವಿವಾದ'. ಅಲ್ಲಿಂದ ಬ್ರೇಕ್ ತಗೊಂಡು ವಿವೇಕ್ ನೊಟ್ಟಿಗೆ ಹೋದರೂ, ಅಲ್ಲಿಯೂ ನೆಲೆ ಕಾಣದೆ ಅಭಿಷೇಕ್ ನ ತೆಕ್ಕೆಗೆ ಬಿದ್ದಳು.. ಆಗ ಹಲವಾರು ಜನ ಹೇಳಿದ್ದಿದೆ ಇವಳದು ಚಂಚಲ ಮನಸು ಅಂತ.. ಎಷ್ಟಾದರೂ ಅವಳು! ಅಭಿಷೇಕ್ ನನ್ನು ಮದುವೆಯಾಗಿ ತಮ್ಮ ಸ್ಟಾರ್ value ಅನ್ನು ಇಬ್ಬರೂ ಹೆಚ್ಹಿಸಿದರು.. ಎಷ್ಟೆಂದರೂ ಸೆಲೆಬ್ರೆಟಿಗಳು ಏನು ಮಾಡಿದರು ಅದಕ್ಕೊಂದು ಉದ್ದೇಶ ಇರುತ್ತೆ!

ಮೊದಲೇ north ನವರು ಸೌತ್ ಇಂಡಿಯನ್ ಹಿರೊಯಿನ ಬಗೆ 'ಚಾಲಾಕಿ', 'ಬುದ್ದಿವಂತರು' ಅನ್ನೋ ಆರೋಪ ಇದೆ. ಏಕೆಂದರೆ ಅವರು ನಾರ್ತ್ ಹೀರೋ ಗಳ ಮನ ಗೆಲ್ಲುತ್ತಾರೆ ಅಂತ.. ಈ ಹಿಂದೆ ರೇಖಾ, ಹೇಮಮಾಲಿನಿ, ಶ್ರೀದೇವಿ! ಈ ಸಾಲಿಗೆ ಐಶ್ ಸಹ ಸೇರಿದಳು..

ಹೀಗೆ ಮಂಗಳೂರಿನ ಹುಡುಗಿ ಬಾಲಿವುಡ್ ನಲ್ಲಿ ಮೆರೆದು hollywood ಗು ಕಾಲಿಟ್ಟು, ಮತ್ತೆ ಬಚ್ಹನ್ ಫ್ಯಾಮಿಲಿ ಸೊಸೆಯಾಗಿ ಮಗುವಿಗಾಗಿ ಎದುರು ನೋಡುತ್ತಿದ್ದಾಳೆ.. ಇಲ್ಲಿಯವರೆಗೂ ಸ್ಟಾರ್ value ಕಡಿಮೆಯಾಗದಿದ್ದರೂ, ತಾಯಿಯಾದ ನಂತರ ಕಾಜಲ್, ಮಾಧುರಿಯವರ ಸಾಲಿಗೆ ಸೇರುತ್ತಾಳೋ ಇಲ್ಲವೋ ಅಂತ ಕಾದು ನೋಡಬೇಕಿದೆ..!